ಲಂಡನ್: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಲು ಬಯಸುವುದಾಗಿ ಅವರ ಪುತ್ರಿ ಅನಿತಾ ಬೋಸ್ ಹೇಳಿದ್ದಾಗಿ ಜಪಾನಿನ ಪ್ರಮುಖ ದಿನಪತ್ರಿಕೆ ವರದಿ ಮಾಡಿದೆ.
‘ತಂದೆಯವರ ಚಿತಾಭಸ್ಮವನ್ನು ಭಾರತಕ್ಕೆ ತರಬೇಕೆಂದು ನಾನು ಬಯಸುತ್ತೇನೆ. ಭಾರತಕ್ಕೆ ಸ್ವಾತಂತ್ರ್ಯ ದೊರೆಯಬೇಕು ಎಂಬುದು ಅವರ(ನೇತಾಜಿ) ಪ್ರಬಲ ಹಾರೈಕೆಯಾಗಿತ್ತು’ ಎಂದು ಜರ್ಮನಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿರುವ ಅನಿತಾ ಹೇಳಿದ್ದಾರೆ.