ಸಿಂಗಪುರ (ಪಿಟಿಐ): ವಿದೇಶಿ ಕಾರ್ಮಿಕರು ವಲಸೆ ಬರುವುದನ್ನು ಇನ್ನಷ್ಟು ನಿಯಂತ್ರಿಸಲಾಗುವುದು ಎಂದು ಹಣಕಾಸು ಖಾತೆಯ ಸಚಿವರೂ ಆಗಿರುವ ಉಪ ಪ್ರಧಾನಿ ಥಹರಮನ್ ಶಣ್ಮುಖರತ್ನಮ್ ತಿಳಿಸಿದ್ದಾರೆ.
ಸರ್ಕಾರದ ಹೊಸ ನಿರ್ಧಾರವು ಭಾರತದ ಕಾರ್ಮಿಕರ ವಲಸೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಬಜೆಜ್ ಭಾಷಣದಲ್ಲಿ ಮಾತನಾಡಿದ ಉಪಪ್ರಧಾನಿ, ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ವಿಧಿಸಿರುವ ವಿದೇಶಿ ಕಾರ್ಮಿಕರ ಮಿತಿಯನ್ನು ಇನ್ನಷ್ಟು ತಗ್ಗಿಸಲಾಗುವುದು ಎಂದಿದ್ದಾರೆ.