<p>ಬಹಳ ಅಪರೂಪಕ್ಕೆ ಮಡದಿ ಬೆಳ್ಳಂಬೆಳಿಗ್ಗೆ ನ್ಯೂಸ್ ಪೇಪರ್ ಹಿಡಿದು ಕೂತಿದ್ದಳು. ‘ಏನಪ್ಪಾ ಇವತ್ತು ವಿಶೇಷ? ಯಾವುದಾದ್ರು ಡಿಸ್ಕೌಂಟ್ ಸೇಲ್ ಹಾಕಿದಾರಾ?’ ಎಂದೆ ನಗುತ್ತ.</p>.<p>‘ಇಲ್ಲರಿ, ಒಂದು ನ್ಯೂಸ್ ನೋಡಿ ನಗು ಬಂತು. ‘ನನ್ನ ಮೇಲೇನಾದ್ರು ಐ.ಟಿ ದಾಳಿ ನಡೆದ್ರೆ ಅದಕ್ಕೆ ವಿರೋಧ ಪಕ್ಷದೋರೇ ಕಾರಣ’ ಅಂತ ಒಬ್ರು ಹೇಳಿದಾರೆ. ನೋಡಿ ಇಲ್ಲಿದೆ’ ಮಡದಿ ತೋರಿಸಿದಳು.</p>.<p>‘ಅಲೆ ಇವ್ನ, ಇದೆಂಗಾತು ಅಂದ್ರೆ, ಯಾರೋ ಕುಡಿದೋನು ನಾನೇನಾದ್ರು ರಸ್ತೇಲಿ ಎಡವಿ ಬಿದ್ರೆ ಅದಕ್ಕೆ ಮುನ್ಸಿಪಾಲ್ಟಿಯೋರೇ ಕಾರಣ ಅಂದಂಗಾತು...’</p>.<p>‘ಅಲ್ಲ, ಪ್ರವಾಹ ಬಂದು ಮನೆ ಮಠ ಕೊಚ್ಕೊಂಡು ಹೋಗೋಕೆ ಯಡ್ಯೂರಪ್ಪ ಕಾರಣ ಅಂದಂಗಾತು...’</p>.<p>‘ಅದೆಂಗೆ?’</p>.<p>‘ಯಡ್ಯೂರಪ್ಪ ಮುಖ್ಯಮಂತ್ರಿ ಆಗ್ತಿದ್ದಂಗೆ ಭಾರೀ ಮಳೆ ಸುರೀತು ಅಂತ ಅವರ ಪಾರ್ಟಿಯೋರೇ ಹೇಳಿಲ್ವ? ಅಂದಮೇಲೆ ಮಳೆ ಅನಾಹುತಕ್ಕೂ ಅವರೇ ಕಾರಣ ಆದಂಗಾತು’.</p>.<p>‘ನಿಂದೂ ಪಾಯಿಂಟು ಬಿಡು. ಇದಕ್ಕೆ ಇನ್ನೊಂದೆರಡು ಸೇರಿಸಬಹುದು. ಬಂಡೆ ಮತ್ತು ಪಂಚೆ ತಮಗೆ ಜಾಮೀನು ಸಿಗದಿರೋಕೆ ಮೀಡಿಯಾದವರೇ ಕಾರಣ ಅನ್ನಬಹುದಾ?’</p>.<p>‘ಅನ್ನಬಹುದು, ಈಗ ಅನರ್ಹರಾಗಿರೋರು ಒಂದು ವೇಳೆ ಅನಾಥರಾಗಿಬಿಟ್ರೆ ಯಾರು ಕಾರಣ ಅನ್ನಬಹುದು?’</p>.<p>‘ಗೊತ್ತಿಲ್ಲಪ್ಪ, ಅದೇ ತರ ಯಡ್ಯೂರಪ್ಪ ಭೇಟಿಗೆ ನಮೋ ಸಾಹೇಬ್ರು ಅವಕಾಶ ಕೊಡದಿರೋದಕ್ಕೆ ಯಾರು ಕಾರಣ ಅನ್ನಬಹುದು?’</p>.<p>‘ನಂಗೂ ಗೊತ್ತಿಲ್ಲ ಕಣ್ರಿ’ ಮಡದಿ ತಲೆ ಕೊಡವಿದಳು.</p>.<p>ಅಷ್ಟರಲ್ಲಿ ಮಗರಾಯ ‘ಪಪ್ಪಾ ನಾ ಸ್ಕೂಲ್ಗೆ ಹೋಗಿ ಬರ್ತೀನಿ. ಇವತ್ತು ಮಿಡ್ ಟರ್ಮ್ ಪರೀಕ್ಷೆ ರಿಸಲ್ಟು. ನಾನೇನಾದ್ರು ಫೇಲಾದ್ರೆ ಅದಕ್ಕೆ ನಮ್ ಟೀಚರ್ಗಳೇ ಕಾರಣ’ ಅಂದ.</p>.<p>‘ಅಲೆ ಇವ್ನ, ಅವರ್ಯಾಕೆ ಕಾರಣ ಆಗ್ತಾರೋ?’</p>.<p>‘ಪರೀಕ್ಷೇಲಿ ನಾನು ಬರೆಯೋದೆಲ್ಲ ಬರೆದಿದೀನಿ. ಅವರು ಮಾರ್ಕ್ಸ್ ಕೊಡದಿದ್ರೆ ನಾನೇನ್ ಮಾಡ್ಲಿ?’</p>.<p>‘ನಾನು ತುಟಿಪಿಟಕ್ಕೆನ್ನದೆ ಮಡದಿ ಮುಖ ನೋಡಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಬಹಳ ಅಪರೂಪಕ್ಕೆ ಮಡದಿ ಬೆಳ್ಳಂಬೆಳಿಗ್ಗೆ ನ್ಯೂಸ್ ಪೇಪರ್ ಹಿಡಿದು ಕೂತಿದ್ದಳು. ‘ಏನಪ್ಪಾ ಇವತ್ತು ವಿಶೇಷ? ಯಾವುದಾದ್ರು ಡಿಸ್ಕೌಂಟ್ ಸೇಲ್ ಹಾಕಿದಾರಾ?’ ಎಂದೆ ನಗುತ್ತ.</p>.<p>‘ಇಲ್ಲರಿ, ಒಂದು ನ್ಯೂಸ್ ನೋಡಿ ನಗು ಬಂತು. ‘ನನ್ನ ಮೇಲೇನಾದ್ರು ಐ.ಟಿ ದಾಳಿ ನಡೆದ್ರೆ ಅದಕ್ಕೆ ವಿರೋಧ ಪಕ್ಷದೋರೇ ಕಾರಣ’ ಅಂತ ಒಬ್ರು ಹೇಳಿದಾರೆ. ನೋಡಿ ಇಲ್ಲಿದೆ’ ಮಡದಿ ತೋರಿಸಿದಳು.</p>.<p>‘ಅಲೆ ಇವ್ನ, ಇದೆಂಗಾತು ಅಂದ್ರೆ, ಯಾರೋ ಕುಡಿದೋನು ನಾನೇನಾದ್ರು ರಸ್ತೇಲಿ ಎಡವಿ ಬಿದ್ರೆ ಅದಕ್ಕೆ ಮುನ್ಸಿಪಾಲ್ಟಿಯೋರೇ ಕಾರಣ ಅಂದಂಗಾತು...’</p>.<p>‘ಅಲ್ಲ, ಪ್ರವಾಹ ಬಂದು ಮನೆ ಮಠ ಕೊಚ್ಕೊಂಡು ಹೋಗೋಕೆ ಯಡ್ಯೂರಪ್ಪ ಕಾರಣ ಅಂದಂಗಾತು...’</p>.<p>‘ಅದೆಂಗೆ?’</p>.<p>‘ಯಡ್ಯೂರಪ್ಪ ಮುಖ್ಯಮಂತ್ರಿ ಆಗ್ತಿದ್ದಂಗೆ ಭಾರೀ ಮಳೆ ಸುರೀತು ಅಂತ ಅವರ ಪಾರ್ಟಿಯೋರೇ ಹೇಳಿಲ್ವ? ಅಂದಮೇಲೆ ಮಳೆ ಅನಾಹುತಕ್ಕೂ ಅವರೇ ಕಾರಣ ಆದಂಗಾತು’.</p>.<p>‘ನಿಂದೂ ಪಾಯಿಂಟು ಬಿಡು. ಇದಕ್ಕೆ ಇನ್ನೊಂದೆರಡು ಸೇರಿಸಬಹುದು. ಬಂಡೆ ಮತ್ತು ಪಂಚೆ ತಮಗೆ ಜಾಮೀನು ಸಿಗದಿರೋಕೆ ಮೀಡಿಯಾದವರೇ ಕಾರಣ ಅನ್ನಬಹುದಾ?’</p>.<p>‘ಅನ್ನಬಹುದು, ಈಗ ಅನರ್ಹರಾಗಿರೋರು ಒಂದು ವೇಳೆ ಅನಾಥರಾಗಿಬಿಟ್ರೆ ಯಾರು ಕಾರಣ ಅನ್ನಬಹುದು?’</p>.<p>‘ಗೊತ್ತಿಲ್ಲಪ್ಪ, ಅದೇ ತರ ಯಡ್ಯೂರಪ್ಪ ಭೇಟಿಗೆ ನಮೋ ಸಾಹೇಬ್ರು ಅವಕಾಶ ಕೊಡದಿರೋದಕ್ಕೆ ಯಾರು ಕಾರಣ ಅನ್ನಬಹುದು?’</p>.<p>‘ನಂಗೂ ಗೊತ್ತಿಲ್ಲ ಕಣ್ರಿ’ ಮಡದಿ ತಲೆ ಕೊಡವಿದಳು.</p>.<p>ಅಷ್ಟರಲ್ಲಿ ಮಗರಾಯ ‘ಪಪ್ಪಾ ನಾ ಸ್ಕೂಲ್ಗೆ ಹೋಗಿ ಬರ್ತೀನಿ. ಇವತ್ತು ಮಿಡ್ ಟರ್ಮ್ ಪರೀಕ್ಷೆ ರಿಸಲ್ಟು. ನಾನೇನಾದ್ರು ಫೇಲಾದ್ರೆ ಅದಕ್ಕೆ ನಮ್ ಟೀಚರ್ಗಳೇ ಕಾರಣ’ ಅಂದ.</p>.<p>‘ಅಲೆ ಇವ್ನ, ಅವರ್ಯಾಕೆ ಕಾರಣ ಆಗ್ತಾರೋ?’</p>.<p>‘ಪರೀಕ್ಷೇಲಿ ನಾನು ಬರೆಯೋದೆಲ್ಲ ಬರೆದಿದೀನಿ. ಅವರು ಮಾರ್ಕ್ಸ್ ಕೊಡದಿದ್ರೆ ನಾನೇನ್ ಮಾಡ್ಲಿ?’</p>.<p>‘ನಾನು ತುಟಿಪಿಟಕ್ಕೆನ್ನದೆ ಮಡದಿ ಮುಖ ನೋಡಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>