‘ಮಂದಿ ಕೈಯಾಗ ರೊಕ್ಕ ಕುಣೀತದ ಅಂತ ಮದಿವಿಯಾಗತಾರ, ಅಲ್ಲಿ ಇಲ್ಲಿ ಓಡಾಡತಾರ. ಅದರರ್ಥ ನಮ್ಮ ಆರ್ಥಿಕತೆ ಅಗದಿ ಭಯಂಕರ ಸ್ಟ್ರಾಂಗ್ ಅದ ಅಂತ ನಮ್ಮ ರೈಲು ಮಂತ್ರಿಗಳು ಕಂಡ್ ಹಿಡಿದಾರ್ರಿ. 2014ಕ್ಕಿಂತ ಮದ್ಲು ಎಷ್ಟ್ ಕಡಿಮೆ ಮದಿವಿ ಆಗತಿದ್ವು, 2014ರ ನಂತರ ನಮೋಯುಗದಾಗೆ ಎಷ್ಟ್ ಮದಿವಿ ಹೆಚ್ಚಾಗ್ಯಾವು, ಅದ್ರಾಗೂ ಈ ವರ್ಸ ಎಷ್ಟ್ ಮದಿವಿ ಹೆಚ್ಚಾಗ್ಯಾವ. ಹಂಗೇ ರೈಲು, ವಿಮಾನದಾಗ ಎಷ್ಟ್ ಮಂದಿ ಹೆಚ್ಚಿಗಿ ಓಡಾಡಕ ಹತ್ಯಾರ ಅಂತ ಸಮೀಕ್ಷೆ ಮಾಡತೀವ್ರಿ. ಅದಕ್ಕ ಪ್ರಶ್ನಾವಳಿ ಮಾಡಾಕಹತ್ತೇವ್ರಿ’ ಎಂದಳು.