<p>ತೆಪರೇಸಿ ಮನೇಲಿ ಬೆಳ್ಳಂಬೆಳಿಗ್ಗೆ ಸಿಬಿಐ ತನಿಖೆ ಶುರುವಾಗಿತ್ತು. ಹೆಂಡ್ತಿ ಪಮ್ಮಿ ಸೌಟು ಹಿಡಿದು ನಿಂತಿದ್ದಳು. ‘ನಿನ್ನಿ ರಾತ್ರಿ ಹನ್ನೊಂದೂವರಿ ಆದ್ರೂ ಮನಿಗೆ ಬಂದಿರ್ಲಿಲ್ಲ... ಹೇಳಿ, ಎಲ್ಲಿದ್ರಿ?’</p>.<p>ತೆಪರೇಸಿ ತಡವರಿಸಿದ ‘ಅದೂ... ಅಸೆಂಬ್ಲೀಲಿ ಯತ್ನಾಳ್ ಸಾಹೇಬ್ರು ಗರಂ ಆಗಿದ್ರಲ್ಲ...’</p>.<p>‘ನೀವು ತಣ್ಣಗೆ ಮಾಡಾಕೆ ಹೋಗಿದ್ರಾ?’</p>.<p>‘ಅದಲ್ಲಲೆ, ನಮ್ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅದಾರಲ್ಲ’.</p>.<p>‘ಅವ್ರು ಹೆಂಗಾದ್ರು ಇರ್ಲಿ, ನೀವೆಲ್ಲಿದ್ರಿ ಹೇಳಿ’.</p>.<p>‘ಥೋ... ನಂಗೆ ಮಾತಾಡಕಾದ್ರು ಬಿಡೆ. ಅಲ್ಲಿ ‘ಇಂಡಿಯ’ ಸಭೆಗೆ ಶಿವಸೇನೆ, ಟಿಎಂಸಿ ಗೈರು<br>ಹಾಜರಾಗಿದ್ವಂತೆ’.</p>.<p>‘ನೀವು ಹಾಜರಾತಿ ಹಾಕಾಕೆ ಹೋಗಿದ್ರಾ?’</p>.<p>‘ನಾನ್ಯಾಕೆ ಹೋಗ್ಲಿ? ಇಲ್ಲಿ ಜಮೀರ್ ಅಹ್ಮದ್ ಮಿನಿಸ್ಟ್ರೂ ಅಸೆಂಬ್ಲಿಗೆ ಹೋಗಿಲ್ಲಂತೆ, ಹಂಗಂತ ನಾನು ಹೋಗಾಕಾಗುತ್ತಾ?’</p>.<p>‘ಅದ್ನೇ ಕೇಳ್ತಿರೋದು, ಎಲ್ಲಿ ಹೋಗಿದ್ರಿ ಅಂತ’.</p>.<p>‘ಮಿಚಾಂಗ್ ಚಂಡಮಾರುತ ಭಾರೀ ಜೋರೈತಂತೆ, ನಿನ್ ತರ. ತಮಿಳುನಾಡಿಗೀಗ ಕಾವೇರಿ ನೀರೇ ಬ್ಯಾಡಂತೆ’.</p>.<p>‘ಮಾತು ಮರೆಸಬೇಡಿ, ಈ ಕಾಗಕ್ಕ, ಗುಬ್ಬಕ್ಕನ ಕತಿ ಎಲ್ಲ ಬ್ಯಾಡ’ ಪಮ್ಮಿ ರಾಂಗಾದಳು.</p>.<p>‘ಆತುಬಿಡು, ಅಲ್ಲಿ ಲೋಕಸಭೇಲಿ ಕಾಂಗ್ರೆಸ್ ನೋರು, ಇಲ್ಲಿ ಬೆಳಗಾವಿ ಅಧಿವೇಶನದಾಗೆ ಬಿಜೆಪಿಯೋರು ಸಭಾತ್ಯಾಗ ಮಾಡಿದ್ರಂತೆ’.</p>.<p>‘ಅವರಿಗೇನ್ ಕೆಲ್ಸ ಇತ್ತೋ ಪಾಪ, ಸಭಾತ್ಯಾಗ ಮಾಡಿರ್ತಾರೆ, ನಿಮಿಗೇನ್ ಕೆಲ್ಸ ಇತ್ತು ಅದನ್ನ ಹೇಳಿ’.</p>.<p>‘ಈ ಎಲ್ಲ ವಿಷ್ಯದ ಬಗ್ಗೆ ನಾವು ಹರಟೆಕಟ್ಟೆ ಫ್ರೆಂಡ್ಸ್ ಬಾರಲ್ಲಿ ಕುಂತು ಓವರ್ ದ ಪೆಗ್ ಚರ್ಚೆ ಮಾಡ್ತಿದ್ವಿ, ಅದ್ಕೆ ಲೇಟಾತು ಏನೀಗ? ನೀನಿಂಗೆ ತೆಲಿ ತಿಂತಿದ್ರೆ ನಾನೂ ಸಭಾತ್ಯಾಗ ಮಾಡ ಬೇಕಾಗ್ತತಿ ನೋಡು’ ತೆಪರೇಸಿಗೆ ಸಿಟ್ಟು ಬಂತು.</p>.<p>‘ನೀವು ಸಭಾತ್ಯಾಗ ಮಾಡಾಕೆ ಇದು ಅಸೆಂಬ್ಲಿ ಅಲ್ಲ, ನಾನು ಸ್ಪೀಕರೂ ಅಲ್ಲ’.</p>.<p>‘ನೀನು ಸ್ಪೀಕರಲ್ಲ ಅನ್ನೋದು ಗೊತ್ತು...’<br /> ‘ಮತ್ತೇನು?’</p>.<p>‘ಲೌಡ್ ಸ್ಪೀಕರು...!’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ತೆಪರೇಸಿ ಮನೇಲಿ ಬೆಳ್ಳಂಬೆಳಿಗ್ಗೆ ಸಿಬಿಐ ತನಿಖೆ ಶುರುವಾಗಿತ್ತು. ಹೆಂಡ್ತಿ ಪಮ್ಮಿ ಸೌಟು ಹಿಡಿದು ನಿಂತಿದ್ದಳು. ‘ನಿನ್ನಿ ರಾತ್ರಿ ಹನ್ನೊಂದೂವರಿ ಆದ್ರೂ ಮನಿಗೆ ಬಂದಿರ್ಲಿಲ್ಲ... ಹೇಳಿ, ಎಲ್ಲಿದ್ರಿ?’</p>.<p>ತೆಪರೇಸಿ ತಡವರಿಸಿದ ‘ಅದೂ... ಅಸೆಂಬ್ಲೀಲಿ ಯತ್ನಾಳ್ ಸಾಹೇಬ್ರು ಗರಂ ಆಗಿದ್ರಲ್ಲ...’</p>.<p>‘ನೀವು ತಣ್ಣಗೆ ಮಾಡಾಕೆ ಹೋಗಿದ್ರಾ?’</p>.<p>‘ಅದಲ್ಲಲೆ, ನಮ್ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅದಾರಲ್ಲ’.</p>.<p>‘ಅವ್ರು ಹೆಂಗಾದ್ರು ಇರ್ಲಿ, ನೀವೆಲ್ಲಿದ್ರಿ ಹೇಳಿ’.</p>.<p>‘ಥೋ... ನಂಗೆ ಮಾತಾಡಕಾದ್ರು ಬಿಡೆ. ಅಲ್ಲಿ ‘ಇಂಡಿಯ’ ಸಭೆಗೆ ಶಿವಸೇನೆ, ಟಿಎಂಸಿ ಗೈರು<br>ಹಾಜರಾಗಿದ್ವಂತೆ’.</p>.<p>‘ನೀವು ಹಾಜರಾತಿ ಹಾಕಾಕೆ ಹೋಗಿದ್ರಾ?’</p>.<p>‘ನಾನ್ಯಾಕೆ ಹೋಗ್ಲಿ? ಇಲ್ಲಿ ಜಮೀರ್ ಅಹ್ಮದ್ ಮಿನಿಸ್ಟ್ರೂ ಅಸೆಂಬ್ಲಿಗೆ ಹೋಗಿಲ್ಲಂತೆ, ಹಂಗಂತ ನಾನು ಹೋಗಾಕಾಗುತ್ತಾ?’</p>.<p>‘ಅದ್ನೇ ಕೇಳ್ತಿರೋದು, ಎಲ್ಲಿ ಹೋಗಿದ್ರಿ ಅಂತ’.</p>.<p>‘ಮಿಚಾಂಗ್ ಚಂಡಮಾರುತ ಭಾರೀ ಜೋರೈತಂತೆ, ನಿನ್ ತರ. ತಮಿಳುನಾಡಿಗೀಗ ಕಾವೇರಿ ನೀರೇ ಬ್ಯಾಡಂತೆ’.</p>.<p>‘ಮಾತು ಮರೆಸಬೇಡಿ, ಈ ಕಾಗಕ್ಕ, ಗುಬ್ಬಕ್ಕನ ಕತಿ ಎಲ್ಲ ಬ್ಯಾಡ’ ಪಮ್ಮಿ ರಾಂಗಾದಳು.</p>.<p>‘ಆತುಬಿಡು, ಅಲ್ಲಿ ಲೋಕಸಭೇಲಿ ಕಾಂಗ್ರೆಸ್ ನೋರು, ಇಲ್ಲಿ ಬೆಳಗಾವಿ ಅಧಿವೇಶನದಾಗೆ ಬಿಜೆಪಿಯೋರು ಸಭಾತ್ಯಾಗ ಮಾಡಿದ್ರಂತೆ’.</p>.<p>‘ಅವರಿಗೇನ್ ಕೆಲ್ಸ ಇತ್ತೋ ಪಾಪ, ಸಭಾತ್ಯಾಗ ಮಾಡಿರ್ತಾರೆ, ನಿಮಿಗೇನ್ ಕೆಲ್ಸ ಇತ್ತು ಅದನ್ನ ಹೇಳಿ’.</p>.<p>‘ಈ ಎಲ್ಲ ವಿಷ್ಯದ ಬಗ್ಗೆ ನಾವು ಹರಟೆಕಟ್ಟೆ ಫ್ರೆಂಡ್ಸ್ ಬಾರಲ್ಲಿ ಕುಂತು ಓವರ್ ದ ಪೆಗ್ ಚರ್ಚೆ ಮಾಡ್ತಿದ್ವಿ, ಅದ್ಕೆ ಲೇಟಾತು ಏನೀಗ? ನೀನಿಂಗೆ ತೆಲಿ ತಿಂತಿದ್ರೆ ನಾನೂ ಸಭಾತ್ಯಾಗ ಮಾಡ ಬೇಕಾಗ್ತತಿ ನೋಡು’ ತೆಪರೇಸಿಗೆ ಸಿಟ್ಟು ಬಂತು.</p>.<p>‘ನೀವು ಸಭಾತ್ಯಾಗ ಮಾಡಾಕೆ ಇದು ಅಸೆಂಬ್ಲಿ ಅಲ್ಲ, ನಾನು ಸ್ಪೀಕರೂ ಅಲ್ಲ’.</p>.<p>‘ನೀನು ಸ್ಪೀಕರಲ್ಲ ಅನ್ನೋದು ಗೊತ್ತು...’<br /> ‘ಮತ್ತೇನು?’</p>.<p>‘ಲೌಡ್ ಸ್ಪೀಕರು...!’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>