ಜೈಪುರ, ಮೇ 27– ರೋಗಿಯೊಬ್ಬರ ಕತ್ತಿನಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದ ಭಾಗ ತೆಗೆದುಹಾಕಿ, ಆಕೆಯ ದೇಹದ ಬೇರೆಡೆಗಳಿಂದ ತೆಗೆದ ಅಂಗಾಂಶಗಳನ್ನು ಜೋಡಿಸುವ ಯಶಸ್ವಿ ಶಸ್ತ್ರಕ್ರಿಯೆಯೊಂದು ಭಾರತದಲ್ಲೇ ಪ್ರಥಮ ಬಾರಿಗೆ ನಡೆಯಿತು.
ಸವಾಯಿ ಮಾನ್ಸಿಂಗ್ ಆಸ್ಪತ್ರೆಯ ವೈದ್ಯೆ ಡಾ. ಬಿ.ಎಸ್. ಚಾಂದೋಲಿಯಾ ಅವರು ಶಸ್ತ್ರಕ್ರಿಯೆ ಪೂರೈಸಲಾಯಿತೆಂದು ಇಂದು ತಿಳಿಸಿದರು.
ಗಲ್ಲ ಮತ್ತು ಗಂಟಲುಗಳಲ್ಲಿ ಕಾಣಿಸಿಕೊಂಡಿದ್ದ ಕ್ಯಾನ್ಸರ್ ಹಿಡಿದ ಅಂಗಾಂಶಗಳನ್ನು ತೆಗೆದು ಹಾಕಿ ಹಣೆ, ಭುಜ ಮತ್ತು ಎದೆ ಭಾಗಗಳಿಂದ ಕೊಯ್ದು ತೆಗೆದ ಚರ್ಮ ಮತ್ತು ಅಂಗಾಂಶಗಳನ್ನು ಅಲ್ಲಿಗೆ ಜೋಡಿಸಲಾಯಿತು.
ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಪೂರ್ಣ
ಬೆಂಗಳೂರು, ಮೇ 26– ಈ ತಿಂಗಳು 31ರಿಂದ ಮೂರು ದಿನಗಳ ಕಾಲ ನಡೆಯುವ 48ನೆಯ ಸಾಹಿತ್ಯ ಸಮ್ಮೇಳನಕ್ಕಾಗಿ ಹೊರಗಡೆಯಿಂದ ಬರುವ 2 ಸಾವಿರ ಜನಪ್ರತಿ ನಿಧಿಗಳು ಇಳಿದುಕೊಳ್ಳಲು ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಮಂಡ್ಯದ ಕೆಲವು ಮಹನೀಯರು ಪ್ರತಿನಿಧಿಗಳಿಗಾಗಿ ತಮ್ಮ ಮನೆ ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. ಸಮ್ಮೇಳನಕ್ಕೆ ಬರುವ ಮಹಿಳಾ ಪ್ರತಿನಿಧಿಗಳನ್ನು ಸೇಂಟ್ ಜೋಸೆಫ್ ಕಾನ್ವೆಂಟ್ನಲ್ಲಿ ಇಳಿಸಲು ವ್ಯವಸ್ಥೆ ಮಾಡಿದೆ.