20 ವರ್ಷದ ನಂತರ ಸತ್ತು ಬದುಕಿದ ಸಾಯಬಣ್ಣ
ಕಲ್ಬುರ್ಗಿ, ಜೂನ್ 1– ಇಲ್ಲಿಂದ ಐದು ಕಿ.ಮೀ ದೂರದ ಹಳ್ಳಿಯೊಂದರಲ್ಲಿ 20 ವರ್ಷಗಳ ಹಿಂದೆ ಸತ್ತು ಸಮಾಧಿ ಮಾಡಲಾದ ವ್ಯಕ್ತಿಯೊಬ್ಬ ಬದುಕಿ ಬಂದ ವಿಚಿತ್ರ ಘಟನೆಯೊಂದು ವರದಿಯಾಗಿದೆ.
ಅನೇಕ ಗ್ರಾಮಸ್ಥರ ಸಮ್ಮುಖದಲ್ಲಿ 20 ವರ್ಷಗಳ ಹಿಂದೆ ಸಮಾಧಿ ಮಾಡಲಾದ ಸಾಯಬಣ್ಣ ಎಂಬ ವ್ಯಕ್ತಿ ಕಳೆದ ಮೇ 13ರಂದು ಹಳ್ಳಿಗೆ ಬಂದು ತನ್ನ ತಾಯಿ–ತಂದೆ ಮತ್ತು ಅಂತ್ಯಕ್ರಿಯೆ ದಿನ ಹಾಜರಿದ್ದ ಗ್ರಾಮಸ್ಥರನ್ನು ಗುರುತಿಸಿದನೆಂದು ಹೇಳಲಾಗಿದೆ.
ಇದನ್ನು ನಂಬಲಾರದವರು ಸತ್ತು ಬದುಕಿ ಬಂದ ಸಾಯಬಣ್ಣನನ್ನು ನೋಡಲು ನೆಲೋಗಿಗೆ ಬಂದರು.