‘ಅನೇಕರಿಗೆ ರಾಜಕೀಯ ಒಂದು ಕಸುಬು’
ಬೆಂಗಳೂರು, ಮೇ 30– ರಾಜಕೀಯದಲ್ಲಿ ಜನಪ್ರತಿನಿಧಿಗಳಾಗಿರುವವರು, ‘ತಾವು ಎಲ್ಲಿವರೆಗೆ ಸಂಪಾದನೆಗೆ ಬಂದಿದ್ದೇವೆ ಎಂದು ತಿಳಿದುಕೊಂಡಿರುತ್ತಾರೋ ಅದುವರೆಗೆ ಸಮಾಜವಾದವೂ ಬಾರದು, ಸಾಮಾಜಿಕ ನ್ಯಾಯವೂ ಸಿಗದು’ ಎಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಇಲ್ಲಿ ಹೇಳಿದರು.
ಬಹುತೇಕ ಮಂದಿ ಶಾಸಕರಿಗೆ, ಜನಜೀವನದ ಕಷ್ಟಕಾರ್ಪಣ್ಯಗಳ ಅರಿವಿಲ್ಲ, ಅರಿಯುವ ಪ್ರಯತ್ನವೂ ಇಲ್ಲ ಎಂದು ಅರಸು ಹೇಳಿದರು.
‘ಬಹುಮಂದಿಗೆ ರಾಜಕೀಯ ಎಂಬುದೊಂದು ಉದ್ಯೋಗ. ಚುನಾವಣೆ ಬಂತು, ಟಿಕೆಟ್ ಸಿಕ್ಕಿತು, ಮೆಂಬರ್ ಆದರು. ಅದನ್ನು ಕಸುಬಾಗಿ ಹಿಡಿದು ಮುಂದುವರಿ
ಯುತ್ತಿದ್ದಾರೆ’ ಎಂದು ಟೀಕಿಸಿದರು.