ಆ್ಯಸಿಡ್ ದಾಳಿಯ ಸಂತ್ರಸ್ತೆಯರಿಗೆ ನಿವೇಶನ, ಮನೆ ಮತ್ತು ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು ಘೋಷಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆ ಅಭಿನಂದನಾರ್ಹ. ಆ್ಯಸಿಡ್ ದಾಳಿಗೊಳಗಾದ ಮಹಿಳೆಯರು ಅನುಭವಿಸುವ ನೋವು, ಅವರ ಪೋಷಕರ ಸಂಕಟ, ಹೆತ್ತ ಮಗಳನ್ನು ಅಂತಹ ಸ್ಥಿತಿಯಲ್ಲಿ ನೋಡಬೇಕಾದ ದುಃಖವನ್ನು ಅವರಷ್ಟೇ ಬಲ್ಲರು. ಈ ಮಹಿಳೆಯರಿಗೆ ಆಸರೆಯಾಗುವ ಘೋಷಣೆಯ ಮೂಲಕ ಅವರ ಬದುಕಿಗೆ ಆಶಾಕಿರಣ ನೀಡಲು ಮುಂದಾಗಿರುವುದು ಮಾದರಿ ನಡೆ.