ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕ್ವಾರಂಟೈನ್‌: ಮುಖ್ಯಮಂತ್ರಿಗೇಕೆ ವಿನಾಯಿತಿ?

Last Updated 5 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕಿಗೆ ಒಳಗಾಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ಸರಿಯಷ್ಟೇ. ಆದರೆ ಅವರು ಅಲ್ಲಿ ಸರ್ಕಾರದ ಕಡತ ಪರಿಶೀಲನೆ, ಮಂಜೂರಾತಿ, ಸಹಿ ಎಂದು ಕಾರ್ಯ ನಿರ್ವಹಿಸುತ್ತಿದ್ದಾರೆಂದು ವರದಿಯಾಗಿದೆ. ಇಂತಹ ಕಾರ್ಯಕ್ಕಾಗಿ ಆಸ್ಪತ್ರೆಗೆ ಕಡತ ಹೊತ್ತು ತರುವ ಸಿಬ್ಬಂದಿ, ಅಧಿಕಾರಿಗಳಿಗೆ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ಅನಿವಾರ್ಯ. ಎಷ್ಟೇ ನಿಗಾ ವಹಿಸಿದರೂ ಸೋಂಕಿನ ಆತಂಕ ತಪ್ಪಿದ್ದಲ್ಲ. ಇದರ ಜೊತೆಗೆ, ಅವರು ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಚಿತ್ರಗಳನ್ನು ತೆಗೆದು, ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತಿದೆ. ಇದರ ಅಗತ್ಯವಿತ್ತೇ? ಕೊರೊನಾ ಸೋಂಕಿತರು ಯಾರೇ ಆಗಿರಲಿ ಅವರು ಇತರರೊಂದಿಗೆ ಸಂಪರ್ಕವನ್ನು ನಿಲ್ಲಿಸಿದರೆ ಅದು ಎಲ್ಲರಿಗೂ ಕ್ಷೇಮ.

-ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT