ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಆರಂಭವಾಗಿರುವ ‘ಆಕ್ಸಿಪ್ಯೂರ್’ ಎಂಬ ಆಮ್ಲಜನಕದ ಬಾರ್ ಬಗ್ಗೆ ಓದಿ ಗಾಬರಿಯಾಯಿತು (ಪ್ರ.ವಾ., ನ. 17). ಶುದ್ಧ ಆಮ್ಲಜನಕ ಸಿಗದೆ ರಾಜಧಾನಿಯಲ್ಲಿ ಉಸಿರಾಟದ ತೊಂದರೆ ಹೆಚ್ಚುತ್ತಿರುವುದನ್ನು ಕಂಡರೆ, ಮಾನವನು ಪ್ರಕೃತಿ ವಿನಾಶದ ಹರಿಕಾರ ಎಂಬುದು ಗಮನಕ್ಕೆ ಬರುತ್ತದೆ. ಕೇವಲ 15 ನಿಮಿಷ ಶುದ್ಧ ಆಮ್ಲಜನಕ ಉಸಿರಾಡಲು ₹299 ಪಾವತಿಸಬೇಕಾಗಿರುವುದು ವಿಪರ್ಯಾಸವೇ ಸರಿ. ಇದೇ ರೀತಿ, ಪ್ರಕೃತಿಯಲ್ಲಿ ಯಥೇಚ್ಛವಾಗಿ ಸಿಗುತ್ತಿರುವ ಶುದ್ಧ ಆಮ್ಲಜನಕಕ್ಕೆ ಹಣ ತೆರಬೇಕಾಗಿದ್ದರೆ ನಮ್ಮ ಗತಿ ಏನಾಗುತ್ತಿತ್ತು?