ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳನ್ನು ಮರೆಸುವ ವ್ಯವಸ್ಥೆ!

Last Updated 13 ಡಿಸೆಂಬರ್ 2018, 17:29 IST
ಅಕ್ಷರ ಗಾತ್ರ

‘ಗುಡಿ, ಚರ್ಚು, ಮಸೀದಿಗಳ ಬಿಟ್ಟು ಬನ್ನಿ, ಬಡತನವ ಬುಡಮಟ್ಟ ಕೀಳಬನ್ನಿ’ ಎಂದರು ರಾಷ್ಟ್ರಕವಿ ಕುವೆಂಪು. ಆದರೆ ನಾವು ಎತ್ತ ಹೊರಟಿದ್ದೇವೆ? ಮಂದಿರ– ಮಸೀದಿ ಎಂದು ಸಾಮಾಜಿಕ ಕ್ಷೋಭೆಯನ್ನು ಉಂಟುಮಾಡುತ್ತಿದ್ದೇವೆ. ಅಷ್ಟೇ ಏಕೆ ನಮ್ಮ ಜಾನಪದವೂ ಕೂಡ ‘ಯಾವ ಗುಡಿಯಾದರೇನು? ನಿದ್ದೆ ಬಂದರೆ ಸಾಕು...’ ಎನ್ನುತ್ತದೆ. ಹಗಲೆಲ್ಲ ದುಡಿದುಬಂದ ಜೀವಕ್ಕೆ ನಿದ್ದೆ ಬಂದರೆ ಸಾಕಲ್ಲವೇ? ಅದು ಬಿಟ್ಟು ಇದು ಗುಡಿಯೋ? ಮಸೀದಿಯೋ? ಎಂಬ ಪ್ರಶ್ನೆ ಬೇಕಿಲ್ಲವಲ್ಲ? ದೇಶದಲ್ಲಿ ರೈತರ ಆತ್ಮಹತ್ಯೆ, ಯುವಕರ ನಿರುದ್ಯೋಗ ಮುಂತಾಗಿ ಹಲವು ಜ್ವಲಂತ ಸಮಸ್ಯೆಗಳಿವೆ. ಆದರೆ ಪ್ರಾಜ್ಞರೆನ್ನಿಸಿಕೊಂಡವರೇ ಅಂಥ ಸಮಸ್ಯೆಗಳನ್ನು ಮರೆಸುತ್ತಿದ್ದಾರೆ!

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT