ಇಪ್ಪತ್ತು ವರ್ಷಗಳ ಹಿಂದೆ ಮರಳಿನ ಸಮಸ್ಯೆ ಇಷ್ಟೊಂದು ತೀವ್ರವಾಗಿರಲಿಲ್ಲ. ಈಗ ಯಾಕೆ ಪರಿಸ್ಥಿತಿ ಹೀಗಾಗಿದೆ? ಮನೆ ಕಟ್ಟಲು ಇಟ್ಟಿಗೆ, ಸಿಮೆಂಟ್, ಕಬ್ಬಿಣ... ಯಾವುದಕ್ಕೂ ಕೊರತೆ ಇಲ್ಲ. ಬ್ಯಾಂಕ್ಗಳು ಸಾಲವನ್ನೂ ನೀಡುತ್ತವೆ. ಆದರೆ ಮರಳಿಗೆ ಮಾತ್ರ ಸಮಸ್ಯೆ ಬಂದದ್ದೇಕೆ? ಮರಳಿನ ಸಲುವಾಗಿ ಕೊಲೆಗಳಾಗಿವೆ, ಅಧಿಕಾರಿಗಳನ್ನು ಬೆದರಿಸಲಾಗುತ್ತಿದೆ. ಇವೆಲ್ಲವನ್ನೂ ನೋಡಿದರೆ ಈ ದಂಧೆಯ ಹಿಂದೆ ‘ರಾಜಕಾರಣ’ ಬಲಾವಾಗಿದೆ ಎಂಬುದು ಸ್ಪಷ್ಟವಲ್ಲವೇ?