ಪ್ರಾದೇಶಿಕ ಜ್ಞಾನವು ಮದ್ದಾಗದ ಹಿತ್ತಲಗಿಡದಂತೆ ಆಗಿರುವ ಬಗ್ಗೆ ಕೆ.ಟಿ.ಸತ್ಯಜಿತ್ ಅವರು ಬರೆದಿರುವ ಲೇಖನ (ಪ್ರ.ವಾ., ಡಿ. 11) ವಾಸ್ತವಿಕ ನೆಲೆಗಟ್ಟಿನಲ್ಲಿ ಮೂಡಿಬಂದಿದೆ. ಭಾರತೀಯ ಸಂಸ್ಕೃತಿ, ಪರಂಪರೆಯು ಅನಾದಿ ಕಾಲದಿಂದಲೂ ಶ್ರೇಷ್ಠವಾಗಿದೆ. ವಿಜ್ಞಾನ, ತಂತ್ರಜ್ಞಾನ ಹಾಗೂ ತತ್ವಜ್ಞಾನದ ಮೂಲ ಬೇರುಗಳನ್ನು ಹೊಂದಿದೆ. ಆದರೆ ಬ್ರಿಟಿಷರ ಆಳ್ವಿಕೆಯ ದಟ್ಟ ಪ್ರಭಾವದಿಂದ ಅದರ ಬೆಳಕು ಕಡಿಮೆಯಾದಂತೆ ಕಾಣುತ್ತಿದೆ.