ಪಕ್ಷಾಂತರಗೊಂಡವರಿಗೆ ಪಕ್ಷಾಂತರಗೊಂಡ ಐದು ವರ್ಷಗಳ ನಂತರವಷ್ಟೇ ಅಧಿಕಾರ ದೊರಕುವಂತೆ ಕಾನೂನು ರೂಪಿಸಲಿ. ಐದು ವರ್ಷಗಳು ಪಕ್ಷದ ಸಿದ್ಧಾಂತ ಮತ್ತು ನಿಲುವಿಗೆ ಬದ್ಧರಾಗಿ ದುಡಿದ ನಂತರ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಲಿ. ಪಕ್ಷಾಂತರ ತಡೆಗೆ ಒಂದು ಬಲವಾದ ಕಾನೂನು ತರದಿದ್ದರೆ ‘ಆಪರೇಷನ್ ಕಮಲ’, ‘ಆಪರೇಷನ್ ಹಸ್ತ’ದಂತಹ ಅನಿಷ್ಟ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ.
-ಪತ್ತಂಗಿ ಎಸ್. ಮುರಳಿ,ಬೆಂಗಳೂರು