ರಾಜ್ಯದಲ್ಲಿ ರೈತರಂತೆಯೇ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು, ಚಿಕ್ಕ ಪುಟ್ಟ ವ್ಯಾಪಾರಿಗಳು, ಬೆಸ್ತರು, ಬೇಡರು... ತಮ್ಮ ತಮ್ಮ ಉದ್ಯೋಗದಲ್ಲಿ ಇದ್ದು, ಇವರಲ್ಲೂ ಅನೇಕರು ಸಾಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್, ವಾಯು ಮಾಲಿನ್ಯ, ಕಸ ನಿರ್ವಹಣೆ, ಕೆರೆಗಳ ಒತ್ತುವರಿ... ಹೀಗೆ ಹತ್ತಾರು ಗಂಭೀರ ಸಮಸ್ಯೆಗಳಿವೆ. ಇವು ಯಾವುವೂ ಅಲಕ್ಷ್ಯ ಮಾಡುವ ವಿಚಾರಗಳಲ್ಲ.