ರಾಜ್ಯದಲ್ಲಿ ಶಾಲೆ, ಕಾಲೇಜುಗಳನ್ನು ಪ್ರಾರಂಭಿಸುವುದಕ್ಕೆ ಮುನ್ನ, ಪ್ರತೀ ಶಾಲೆ, ಕಾಲೇಜಿನಲ್ಲೂ ಒಬ್ಬರು ಆಪ್ತ ಸಮಾಲೋಚಕರನ್ನು ಸರ್ಕಾರ ನೇಮಿಸಬೇಕು. ಕೊರೊನಾ ಸೋಂಕಿನ ಕಾರಣದಿಂದ ಪಾಲಕರು ತಮ್ಮ ಮಕ್ಕಳನ್ನು ಭಯ, ಆತಂಕದ ಮನಃಸ್ಥಿತಿಯಲ್ಲೇ ಕಳುಹಿಸಲು ಮನಸ್ಸು ಮಾಡಬಹುದು. ಮಕ್ಕಳು ಸಹ ಅಳುಕಿನಿಂದಲೇ ಶಾಲೆಗೆ ಬರಬಹುದು.