ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಕಾರಣಕ್ಕಾಗಿ ಕಾಂಗ್ರೆಸ್– ಜೆಡಿಎಸ್ ಒಂದಾಗಿ ಸರ್ಕಾರ ರಚಿಸಿವೆ. ಮುಂದಿನ ಲೊಕಸಭಾ ಚುನಾವಣೆಯ ವೇಳೆಗೆ ರಾಜಕೀಯ ಪಕ್ಷಗಳ ನವರಂಗಿ ಆಟಗಳು ಯಾವ್ಯಾವ ರೂಪ ಪಡೆಯುವವು ಎಂದು ಊಹಿಸಲಾಗದು. ಇರುವಷ್ಟು ಕಾಲ ಭ್ರಷ್ಟಾಚಾರರಹಿತವಾದ ಉತ್ತಮ ಆಡಳಿತವನ್ನು ನೀಡುವ ನಿಟ್ಟಿನಲ್ಲಿ ಸಚಿವರು ಮತ್ತು ಮುಖ್ಯಮಂತ್ರಿ ಗಮನ ಕೇಂದ್ರೀಕರಿಸುವುದು ಸೂಕ್ತ.