‘ಸೂರ್ಯನಿಗೆ 40 ನಿಮಿಷ ತಡವಾಗಿ ಹುಟ್ಟಲು ಹೇಳಿದ್ದು ನಾನೇ...’ ಎಂದು ಬಿಡದಿ ನಿತ್ಯಾನಂದ ಪೀಠದ ನಿತ್ಯಾನಂದ ಸ್ವಾಮೀಜಿ ಹೇಳಿದ್ದಾರೆ (ಪ್ರ.ವಾ., ಜುಲೈ 5). ಸ್ವಾಮೀಜಿ... ಸೂರ್ಯ ತನ್ನ ಸಮಯಕ್ಕೇ ಬರಲಿ. ಅವನ ಕಾಯಕ ಅವನದು. ಸೂರ್ಯನಿಗೆ ಆದೇಶ ನೀಡುವ ತಾವು, ಇಂದ್ರಪ್ರಸ್ಥದ ವರುಣನಿಗೆ ಕೊಡಗು, ಮಲೆನಾಡು, ಉತ್ತರ ಕರ್ನಾಟಕದ ನಾನಾ ಭಾಗಗಳೂ ಸೇರಿದಂತೆ ಭಾರತದಾದ್ಯಂತ ಸಕಾಲದಲ್ಲಿ ಮಳೆ ಸುರಿಸಲು ಆದೇಶಿಸಿ, ಜಲಾಶಯಗಳು ಭರ್ತಿಯಾಗುವಂತೆ ಮಾಡಿ ಪುಣ್ಯ ಕಟ್ಟಿಕೊಳ್ಳಿ...!