ಪ್ರಶ್ನೆಗೆ ಪ್ರಶ್ನೆ ಎಂದಿಗೂ ಉತ್ತರವಾಗಲಾರದು. ಇದರಿಂದ ತಪ್ಪನ್ನು ಸರಿಪಡಿಸಲೂ ಆಗದು. ಹೇಳಿಕೆಗಷ್ಟೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಾಗದೆ ವಾಸ್ತವದಲ್ಲೂ ಪ್ರಜಾಪ್ರಭುತ್ವದ ತತ್ವಗಳನ್ನು ಅಳವಡಿಸಿಕೊಂಡು ಅದರ ಭಾಗವಾಗಿ ಹೆಮ್ಮೆಪಡಬೇಕಿದೆ. ಪ್ರಶ್ನಿಸುವವರು ಪರದೇಶಿಗರು, ಅಂತಹವರಿಗೆ ದೇಶದಲ್ಲಿ ಅವಕಾಶವಿಲ್ಲ ಎಂದು ಹೆದರಿಸುವುದರ ಬದಲು, ಅವರಿಗೆ ಉತ್ತರ ನೀಡುವ ಧೈರ್ಯ ತೋರಬೇಕು. ವಾದ– ಪ್ರತಿವಾದ, ಅಭಿಪ್ರಾಯಭೇದ ಇವು ಪ್ರಜಾತಂತ್ರದ ತಳಹದಿ ಎಂಬುವುದನ್ನು ಎಂದಿಗೂ ಮರೆಯಲಾಗದು.