ಕೃಷ್ಣಾ ನದಿ ಬತ್ತಿ, ಮಹಾರಾಷ್ಟ್ರದಿಂದ ನೀರು ತರುವಂತೆ ಜನರು ಗೋಗರೆಯುತ್ತಿದ್ದಾಗ, ರೈತರು ನಡುಬೀದಿಯಲ್ಲಿ ನಿಂತು ಮಹದಾಯಿ ಹೋರಾಟ ಮಾಡುತ್ತಿರುವಾಗ ಇವರ ‘ಉತ್ತರ ಕರ್ನಾಟಕ ಪ್ರೀತಿ’ ಎಲ್ಲಿತ್ತು? ಮೊದಲು ಜನರ ಕಲ್ಯಾಣ ಮಾಡಿ, ಅವರ ಕಷ್ಟಗಳಿಗೆ ಸ್ಪಂದಿಸಿ ಆಮೇಲೆ ಇಲ್ಲಿಂದ ಸ್ಪರ್ಧೆಗಿಳಿದರೆ ಅದಕ್ಕೊಂದು ಅರ್ಥವಿರುತ್ತದೆ.
–ವಿನಾಯಕ ಮಠಪತಿ, ಅಥಣಿ