ವಾರ್ಡ್ ನಂ. 160, ರಾಜರಾಜೇಶ್ವರಿ ನಗರದ ಬಿ.ಇ.ಎಂ.ಎಲ್ ಬಡಾವಣೆಗೆ ಸೇರಿದ 4ನೇ ಹಂತದಲ್ಲಿರುವ, 9ನೇ ಕ್ರಾಸ್, ರಾಘವೇಂದ್ರ ಸ್ವಾಮಿಗಳ ಮಠದಿಂದ ಹಲಗೇವಡೇರಹಳ್ಳಿಗೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ನಿರ್ಮಿತವಾಗುತ್ತಿರುವ ಚರಂಡಿ ದುಸ್ಥಿತಿಯಲ್ಲಿದೆ. ಮಳೆ ಬಂದಾಗ ಈ ಮೋರಿಯಲ್ಲಿ ನೀರು ಹರಿಯುವುದು ಕಷ್ಟ. ಈ ಮೋರಿ ಮೇಲೆ ಕಾಂಕ್ರೀಟ್ ಸ್ಲ್ಯಾಬ್ಗಳನ್ನೂ ಸರಿಯಾಗಿ ಜೋಡಿಸಿಲ್ಲ.
ಮೋರಿಯಲ್ಲಿ ಮರ ಗಿಡಗಳ ಬೇರುಗಳು ಬೆಳೆದು ನಿಂತು ನೀರು ಹರಿಯುವುದಕ್ಕೆ ಅಡ್ಡಿಯಾಗುತ್ತಿದೆ. ಇದರಿಂದಾಗಿ ಸೊಳ್ಳೆ ಸಂತತಿ ಹೆಚ್ಚುತ್ತಿದ್ದು, ಹಾವುಗಳು, ಚೇಳುಗಳೂ ಆಗಾಗ ಕಾಣಿಸಿಕೊಳ್ಳುತ್ತವೆ. ನಗರ ಪಾಲಿಕೆ ಅಧಿಕಾರಿಗಳು ಈ ರಸ್ತೆಗೆ ಖುದ್ದಾಗಿ ಭೇಟಿ ನೀಡಿ ಈ ರಸ್ತೆ ಹಾಗೂ ಮೋರಿಯ ಸ್ಥಿತಿಯನ್ನು ಕಣ್ಣಾರೆ ಕಾಣಬಹುದು. ಆಗಲಾದರೂ ಇಲ್ಲಿನ ಸಾರ್ವಜನಿಕರು ಅನುಭವಿಸುತ್ತಿರುವ ಕಷ್ಟ ಅವರಿಗೆ ಅರ್ಥವಾದೀತು.