ಟಿ.ಕೆ. ತ್ಯಾಗರಾಜ್ ಅವರ ‘ನನ್ನ ಮೊಹ್ಮದ ಸಿಕ್ಕರೂ ಹುಡುಕಾಟ ನಿಲ್ಲಲಿಲ್ಲ!’ ಲೇಖನ (‘ಭಾವಭಿತ್ತಿ’, ಪ್ರ.ವಾ., ಜುಲೈ 18) ಓದಿ ಕಣ್ತುಂಬಿ ಬಂತು.
ಇತ್ತೀಚೆಗೆ ಅಲ್ಲಲ್ಲಿ ನಡೆಯುತ್ತಿರುವ ಕೋಮು ಗಲಭೆಗಳನ್ನು ನೋಡಿದಾಗ ನಮ್ಮ ಸುತ್ತಮುತ್ತಲೂ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಹೋಗಿರುವ, ನಮ್ಮ ಕಷ್ಟಸುಖಗಳಿಗೆ ಸ್ಪಂದಿಸುತ್ತಿರುವ ಮುಸ್ಲಿಮರು ನಮಗೆ ನೆನಪಾಗುತ್ತಾರೆ.