ಈಗ ಎಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ತಲೆ ಎತ್ತುತ್ತಿರುವುದು, ಗ್ರಾಮೀಣ ಪ್ರದೇಶದಲ್ಲಿಯೂ ಶುದ್ಧ ನೀರಿನ ಬಗ್ಗೆ ಜಾಗೃತಿ ಮೂಡುತ್ತಿರುವುದು ಸಂತಸದ ಸಂಗತಿ. ಈ ಘಟಕಗಳಿಂದ ಶುದ್ಧ ನೀರು ಒಂದೆಡೆ ಸಂಗ್ರಹಗೊಳ್ಳುತ್ತಿದ್ದರೆ, ದೊಡ್ಡ ಪ್ರಮಾಣದ ಅನುಪಯುಕ್ತ ನೀರು ಚರಂಡಿಯ ಪಾಲಾಗುತ್ತಿದೆ.
ಈ ನೀರನ್ನು ಇಂಗುಗುಂಡಿಯ ಮೂಲಕ ಹರಿಸಿದರೆ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಹೀಗಾಗಿ ಪ್ರತೀ ಘಟಕದ ಹತ್ತಿರ ಇಂಗುಗುಂಡಿ ತೋಡಿಸಲು ಸರ್ಕಾರ ಸೂಚಿಸಬೇಕು. ಈ ಘಟಕಗಳನ್ನು ನಿರ್ಮಿಸಿರುವವರು ಸ್ವಪ್ರೇರಣೆಯಿಂದ ಇಂಗುಗುಂಡಿಗಳನ್ನು ತೋಡಿಸಿ, ಅನುಪಯುಕ್ತ ನೀರು ಮತ್ತು ಮಳೆ ನೀರನ್ನು ಇದರಲ್ಲಿ ಹರಿಸುವ ವ್ಯವಸ್ಥೆ ಮಾಡಬೇಕು. ತತ್ಫಲವಾಗಿ ಕೊಳವೆಬಾವಿಯೂ ನೀರಿನಿಂದ ಸಮೃದ್ಧವಾಗುತ್ತದೆ.
- ರಾಜೂ ಎಸ್. ಪೇಟಕರ, ಹಾವೇರಿ