ರಾಜ್ಯದ ಮಹತ್ವದ ಇಲಾಖೆಗಳಲ್ಲಿ ಒಂದಾದ ಕಂದಾಯ ಇಲಾಖೆಯ ಪ್ರಮುಖ ಹುದ್ದೆಯಾದ ರೆವಿನ್ಯೂ ಇನ್ಸ್ಪೆಕ್ಟರ್ (ರಾಜಸ್ವ ನಿರೀಕ್ಷಕರು) ಹುದ್ದೆಗಳಿಗೆ ೧೯೮೦ರ ಬಳಿಕ ನೇರ ನೇಮಕಾತಿಯೇ ನಡೆದಿಲ್ಲ.
ಕಂದಾಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಈ ಹುದ್ದೆಯ ಖಾಲಿಯಾದ ಸ್ಥಾನಗಳ ಪೈಕಿ ಶೇಕಡ ೩೦ರಷ್ಟನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ಅದು ಆಗುತ್ತಿಲ್ಲ. ಕೇವಲ ಮುಂಬಡ್ತಿ ಮೂಲಕ ತುಂಬಲಾಗುತ್ತಿದೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಕಂದಾಯ ಸಚಿವರು ಈ ಕುರಿತು ಗಮನ ಹರಿಸಬೇಕು.