ಪದವಿಪೂರ್ವ ಕಾಲೇಜುಗಳು ಆರಂಭವಾಗಿ ಎರಡು ತಿಂಗಳಾಗುತ್ತ ಬಂದಿದ್ದರೂ ಪಠ್ಯಪುಸ್ತಕಗಳು ಇನ್ನೂ ದೊರೆಯುತ್ತಿಲ್ಲ,
ಇತರೆ ಎಲ್ಲಾ ಸರ್ಕಾರಿ ನೌಕರರಿಗೆ ಎರಡು ವರ್ಷಗಳ ಕಾಯಂಪೂರ್ವ ಸೇವಾ ಅವಧಿ ನಿಗದಿಪಡಿಸಿದ್ದರೂ, ಪದವಿಪೂರ್ವ ಉಪನ್ಯಾಸಕರಿಗೆ ಮಾತ್ರ 4 ವರ್ಷಗಳ ಕಾಯಂಪೂರ್ವ ಸೇವಾ ಅವಧಿ ನಿಗದಿಪಡಿಸಿದೆ ಸರ್ಕಾರ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ಪದವಿ ಕಾಲೇಜು ಉಪನ್ಯಾಸಕರಿಗೆ ವಾರಕ್ಕೆ 16 ಗಂಟೆಗಳ ಬೋಧನಾ ಅವಧಿ, ಆದರೆ ಪದವಿಪೂರ್ವ ಉಪನ್ಯಾಸಕರಿಗೆ ಮಾತ್ರ ವಾರಕ್ಕೆ 20 ಗಂಟೆಗಳ ಬೋಧನಾ ಅವಧಿ, ವೇತನ ತಾರತಮ್ಯದ ವಿರುದ್ಧ ಹೋರಾಡಿದರೆ ಬಗೆಹರಿಸುವ ಆಶ್ವಾಸನೆ ನೀಡಿ ಕಣ್ಣಿಗೆ ಮಣ್ಣೆರಚಲಾಗಿದೆ.
2007ರ ನಂತರ ನೇಮಕಗೊಂಡು ಉಪನ್ಯಾಸಕರಿಗೆ ₨ 500 ವಿಶೇಷ ಭತ್ಯೆ ನೀಡುತ್ತಿಲ್ಲ. ಈ ಎಲ್ಲಾ ಅಂಶಗಳನ್ನು ನೋಡಿದರೆ ಸರ್ಕಾರ, ಶಿಕ್ಷಣ ಮಂತ್ರಿಗಳು ಪದವಿಪೂರ್ವ ಉಪನ್ಯಾಸಕರು ಹಾಗೂ 6 ಲಕ್ಷ ವಿದ್ಯಾರ್ಥಿಗಳ ವಿರುದ್ಧ ಬಿದ್ದು ಹಿತಕಾಯಲು ವಿಫಲರಾಗಿದ್ದಾರೆ. ಪಠ್ಯಪುಸ್ತಕ ನೀಡದೇ ಇದ್ದರೂ ಶಿಕ್ಷಣ ಮಂತ್ರಿಗಳಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಇದೆಯೇ?