ಮೊಸಳೆಯೊಂದು ತೊಗರಿ ಹೊಲಕ್ಕೆ ನುಗ್ಗಿದ್ದ ಸುದ್ದಿಯು (ಪ್ರ.ವಾ., ನ. 30) ಗ್ರಾಮಸ್ಥರಿಗೆ ಮಾತ್ರವಲ್ಲ ನಮಗೂ ಆತಂಕ ತಂದಿದೆ. ಬೇಳೆಯ ಬೆಲೆ ಮೊದಲೇ ಗಗನಕ್ಕೇರಿರುವಾಗ ಮೊಸಳೆಗಳೆಲ್ಲ ಸಸ್ಯಾಹಾರಿಗಳಾಗಿಬಿಟ್ಟರೆ ಏನು ಗತಿ?
‘ಮಕರ’ ಸಂಕ್ರಾಂತಿಗೆ ತೊಗರಿ ಕಟಾವು ಮಾಡುವುದು ರೂಢಿ. ಈ ವರ್ಷ ಮಕರವೇ ತೊಗರಿ ಕಟಾವು ಮಾಡಲು ಬಂದು ಕ್ರಾಂತಿಯನ್ನೆಬ್ಬಿಸಿದೆ!
ಮೊಸಳೆಯು ಬೇಳೆಯ ಬೆಲೆ ಏರಿಕೆಗಾಗಿ ಕಣ್ಣೀರು ಹಾಕುತ್ತಿತ್ತೇ ಎಂಬುದನ್ನು ವರದಿ ತಿಳಿಸಿಲ್ಲ. ಆ ಕೆಲಸವನ್ನು ರಾಜಕಾರಣಿಗಳು ಈಗಾಗಲೇ ಮಾಡುತ್ತಿರುವುದರಿಂದ ಅದರಲ್ಲಿ ಹೊಸತೇನೂ ಇಲ್ಲ ಎಂದು ವರದಿಗಾರರಿಗೆ ಅನ್ನಿಸಿರಬಹುದು.