<p>ಕರ್ನಾಟಕದ 8 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸುವ ಹಾಗೆಯೇ ಬೆಂಗಳೂರು–ಮೈಸೂರು ಚತುಷ್ಪಥ ರಸ್ತೆಯನ್ನು ಷಟ್ಪಥ ರಸ್ತೆಯಾಗಿ ಪರಿವರ್ತಿಸುವ ಪ್ರಸ್ತಾವಕ್ಕೆ ಕೇಂದ್ರದ ಒಪ್ಪಿಗೆ ಸಿಕ್ಕಿದೆ ಎಂದು ಲೋಕೋಪಯೋಗಿ ಸಚಿವರು ತಿಳಿಸಿದ್ದಾರೆ.<br /> ಇದು ಸಂತೋಷದ ವಿಚಾರ. ಆದಷ್ಟು ಶೀಘ್ರದಲ್ಲೇ ಈ ಯೋಜನೆ ಅನುಷ್ಠಾನಗೊಂಡು ಪೂರ್ಣವಾಗಲೆಂದು ಹಾರೈಸೋಣ. ಈ ಪೈಕಿ ಒಂದೆರಡು ರಸ್ತೆಗಳ ಕುರಿತು ಗೊಂದಲವಿದೆ: ಅವೆಂದರೆ–<br /> <br /> 1)ಬೆಂಗಳೂರು–ಮೈಸೂರು– ಮಡಿಕೇರಿ–ಬಂಟ್ವಾಳ (367 ಕಿ.ಮೀ.)<br /> 2)ಸಿರಗುಪ್ಪ–ಬಳ್ಳಾರಿ–ಹಿರಿಯೂರು –ಹುಳಿಯಾರ್–ಚಿಕ್ಕನಾಯಕನಹಳ್ಳಿ –ನಾಗಮಂಗಲ–ಶ್ರೀರಂಗಪಟ್ಟಣ– ಮೈಸೂರು–ನಂಜನಗೂಡು (638 ಕಿ.ಮೀ.)<br /> <br /> ಈ ಎರಡೂ ರಸ್ತೆಗಳಲ್ಲಿ ಬೆಂಗಳೂರು–ಮೈಸೂರು ಇಲ್ಲವೇ ಶ್ರೀರಂಗಪಟ್ಟಣ–ಮೈಸೂರು ರಸ್ತೆಗಳು ಒಳಗೊಳ್ಳುವುದರಿಂದ ಇವುಗಳಿಗೆ ಪ್ರತ್ಯೇಕ ವೆಚ್ಚ ತೋರಿಸುವುದು ಸರಿಯಾಗಲಾರದು. ಒಮ್ಮೆ ಬೆಂಗಳೂರು–ಮೈಸೂರು ರಸ್ತೆ ಷಟ್ಪಥವಾದೊಡನೆಯೇ ಬೆಂಗಳೂರು–ಮೈಸೂರು ಹಾಗೂ ಶ್ರೀರಂಗಪಟ್ಟಣ–ಮೈಸೂರು ಭಾಗಗಳು ಪ್ರತ್ಯೇಕವಾಗಿ ಪರಿವರ್ತನೆಗೊಳ್ಳಬೇಕಾದ ಅಥವಾ ಮೇಲ್ದರ್ಜೆಗೇರಬೇಕಾದ ಅಗತ್ಯ ಇರುತ್ತದೆಯೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕದ 8 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸುವ ಹಾಗೆಯೇ ಬೆಂಗಳೂರು–ಮೈಸೂರು ಚತುಷ್ಪಥ ರಸ್ತೆಯನ್ನು ಷಟ್ಪಥ ರಸ್ತೆಯಾಗಿ ಪರಿವರ್ತಿಸುವ ಪ್ರಸ್ತಾವಕ್ಕೆ ಕೇಂದ್ರದ ಒಪ್ಪಿಗೆ ಸಿಕ್ಕಿದೆ ಎಂದು ಲೋಕೋಪಯೋಗಿ ಸಚಿವರು ತಿಳಿಸಿದ್ದಾರೆ.<br /> ಇದು ಸಂತೋಷದ ವಿಚಾರ. ಆದಷ್ಟು ಶೀಘ್ರದಲ್ಲೇ ಈ ಯೋಜನೆ ಅನುಷ್ಠಾನಗೊಂಡು ಪೂರ್ಣವಾಗಲೆಂದು ಹಾರೈಸೋಣ. ಈ ಪೈಕಿ ಒಂದೆರಡು ರಸ್ತೆಗಳ ಕುರಿತು ಗೊಂದಲವಿದೆ: ಅವೆಂದರೆ–<br /> <br /> 1)ಬೆಂಗಳೂರು–ಮೈಸೂರು– ಮಡಿಕೇರಿ–ಬಂಟ್ವಾಳ (367 ಕಿ.ಮೀ.)<br /> 2)ಸಿರಗುಪ್ಪ–ಬಳ್ಳಾರಿ–ಹಿರಿಯೂರು –ಹುಳಿಯಾರ್–ಚಿಕ್ಕನಾಯಕನಹಳ್ಳಿ –ನಾಗಮಂಗಲ–ಶ್ರೀರಂಗಪಟ್ಟಣ– ಮೈಸೂರು–ನಂಜನಗೂಡು (638 ಕಿ.ಮೀ.)<br /> <br /> ಈ ಎರಡೂ ರಸ್ತೆಗಳಲ್ಲಿ ಬೆಂಗಳೂರು–ಮೈಸೂರು ಇಲ್ಲವೇ ಶ್ರೀರಂಗಪಟ್ಟಣ–ಮೈಸೂರು ರಸ್ತೆಗಳು ಒಳಗೊಳ್ಳುವುದರಿಂದ ಇವುಗಳಿಗೆ ಪ್ರತ್ಯೇಕ ವೆಚ್ಚ ತೋರಿಸುವುದು ಸರಿಯಾಗಲಾರದು. ಒಮ್ಮೆ ಬೆಂಗಳೂರು–ಮೈಸೂರು ರಸ್ತೆ ಷಟ್ಪಥವಾದೊಡನೆಯೇ ಬೆಂಗಳೂರು–ಮೈಸೂರು ಹಾಗೂ ಶ್ರೀರಂಗಪಟ್ಟಣ–ಮೈಸೂರು ಭಾಗಗಳು ಪ್ರತ್ಯೇಕವಾಗಿ ಪರಿವರ್ತನೆಗೊಳ್ಳಬೇಕಾದ ಅಥವಾ ಮೇಲ್ದರ್ಜೆಗೇರಬೇಕಾದ ಅಗತ್ಯ ಇರುತ್ತದೆಯೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>