ಕೂಲಿ ಮಾಡಿ, ಅಲ್ಪ–ಸ್ವಲ್ಪ ಹಣ ಉಳಿಸಿ, ಬ್ಯಾಂಕ್ ಖಾತೆಯಲ್ಲಿಟ್ಟು ವ್ಯವಹರಿಸಿದರೆ, ನಮ್ಮ ಹಣಕ್ಕೆ ನಾವೇ ಸೇವಾ ಶುಲ್ಕ ಕಟ್ಟುವಂತಾಗಿರುವುದು ದುರ್ದೈವ. ಹೀಗಾದರೆ ಖಾತೆಯನ್ನಾದರೂ ಏಕೆ ಹೊಂದಬೇಕು? ಎಲ್ಲರೂ ಬ್ಯಾಂಕ್ ಖಾತೆ ಹೊಂದಬೇಕು ಎಂದು ಪ್ರಧಾನಿ ಹೇಳುತ್ತಾರೆ. ಆ ಮೂಲಕ ಜನಸಾಮಾನ್ಯರನ್ನು ದೋಚುವ ಉದ್ದೇಶ ವಿರಬಹುದೇ ಎಂಬ ಸಂದೇಹ ಈಗ ಮೂಡುತ್ತದೆ.