82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಯಚೂರಿನಲ್ಲಿ ಜರುಗಲಿದೆ. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರಕಿದ ನಂತರ ಮೊದಲ ಬಾರಿ ಇಲ್ಲಿಗೆ ಇಂಥ ಅವಕಾಶ ದೊರೆತಿರುವುದರಿಂದ ಈ ಭಾಗದ ಸಾಹಿತಿಗಳನ್ನೇ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕು. ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯ ಜೊತೆಗೆ ಕನ್ನಡ ಸಾಹಿತ್ಯವನ್ನು ಬೆಳೆಸಲು ಇದು ಪೂರಕ. ಸ್ಥಳೀಯ ಕವಿಗಳು ಈ ಭಾಗದ ಸ್ಥಿತಿಗತಿಯನ್ನು ಅರಿತಿರುವುದರಿಂದಲೂ ಇಂತಹ ಕ್ರಮ ಹೆಚ್ಚು ಸೂಕ್ತ.