ಕಾವೇರಿ ಅವರು ತಮ್ಮ ಹೆಸರಿನ ಜೊತೆಗೆ ಕಾವೇರಿ ನದಿ, ಕಾವೇರಿ ಹಾಡುಗಳನ್ನು ಬಳಸಿ 15 ದಿನ ಪ್ರಚಾರ ಮಾಡಿದರು. ಪ್ರಚಾರ ವಾಹನಗಳಲ್ಲಿ ‘ಕಾವೇರಿ’ ಕುರಿತಾದ ಹಾಡುಗಳೇ ಜನರ ಕಿವಿಗೆ ಬಿದ್ದವು. ಸಕ್ಕರೆ ನಗರಿಯಲ್ಲಿ ಅವರ ಮುತ್ತಿನಂಥ ಮಾತುಗಳು ಬಹಳ ಸವಿ ಎನಿಸಿದವು. ಚಿಕ್ಕಮಗಳೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಎಂಬಿಎ ಪೂರೈಸಿ, ತಿಂಗಳಿಗೆ ₹ 1.5 ಲಕ್ಷ ಸಂಬಳದ ಕೆಲಸ ತ್ಯಜಿಸಿ ಚುನಾವಣಾ ಕಣಕ್ಕಿಳಿದಿದ್ದ ಅವರನ್ನು ಎಲ್ಲರೂ ‘ಮಂಡ್ಯಕ್ಕೆ ಏಕೆ ಬಂದಿರಿ’ ಎಂದು ಪ್ರಶ್ನಿಸುತ್ತಿದ್ದರು. ಅದಕ್ಕವರು ‘ಮಂಡ್ಯ ನನಗಿಷ್ಟ’ ಎಂದು ನಗುತ್ತಾ ಮುನ್ನಡೆಯುತ್ತಿದ್ದರು.