ವಿಜಯಪುರದಲ್ಲಿ ಈಚೆಗೆ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಮ್ಮ ಮಾತಿನ ನಡುವೆ, ಸರ್ಕಾರಿ ಶಾಲೆಗಳ ಬಗ್ಗೆ ವ್ಯಕ್ತವಾಗುತ್ತಿರುವ ಕೀಳರಿಮೆ ಹೋಗಲಾಡಿಸಲು ತಮ್ಮ ಕತೆಯನ್ನೇ ಶಿಕ್ಷಕ ಸಮೂಹಕ್ಕೆ ಹೇಳುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಸಭಾಂಗಣ ನಗೆಗಡಲಲ್ಲಿ ತೇಲಿತು.
‘ನಂಗ ಸರ್ಕಾರಿ ಸಾಲೀ ಮೇಲೆ ಭಾರಿ ಪ್ರೀತಿ. ಇಲ್ಲಿನ ಶಿಕ್ಷಕರನ್ನು ಶೈಕ್ಷಣಿಕವಾಗಿ ಸುಧಾರಿಸಿದರೆ, ಇಡೀ ವ್ಯವಸ್ಥೆಯೇ ಬದಲಾಗುತ್ತೆ ಅಂತ ಪರೀಕ್ಷೆ ಆಯೋಜಿಸಲು ಮುಂದಾದೆ. ಆದ್ರೆ ಭಾಳ ಶ್ಯಾಣೆಯಿರುವ ನೀವೂ ಎಲ್ಲಿ ತಮ್ಮ ಬಂಡವಾಳ ಬೀದಿಗೆ ಬಂದು ನಗೆಪಾಟಲಿಗೀಡಾಗ್ತ್ವೀ ಎಂದು ನಮ್ಗ ಅಂಜಿಸಿದ್ರೀ.