ಬೆಂಗಳೂರು: ಈ ವರ್ಷದ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಆಡಲಿರುವ ಬೆಂಗ ಳೂರು ಬುಲ್ಸ್ ತಂಡವು ರೋಹಿತ್ ಕುಮಾರ್ ಅವರನ್ನು ಉಳಿಸಿಕೊಂಡಿದೆ.
ಹೋದ ವರ್ಷದ ಟೂರ್ನಿಯಲ್ಲಿ ತಂಡವನ್ನು ರೋಹಿತ್ ಮುನ್ನಡೆಸಿದ್ದರು. ಅಕ್ಟೋಬರ್ 19 ರಿಂದ ಆರಂಭ ವಾಗಲಿರುವ ಆರನೆ ಆವೃತ್ತಿಯ ಟೂರ್ನಿಯಲ್ಲಿ ಆಡುವ ತಂಡಗಳು ಒಟ್ಟು 21 ಆಟಗಾರರನ್ನು ಉಳಿಸಿಕೊಂಡಿವೆ.
ಯು ಮುಂಬಾ, ತೆಲುಗು ಟೈಟನ್ಸ್ ಹಾಗೂ ಪಟ್ನಾ ಪೈರೇಟ್ಸ್ ತಂಡಗಳು ಕ್ರಮವಾಗಿ ಅನೂಪ್ ಕುಮಾರ್, ರಾಹುಲ್ ಚೌಧರಿ ಹಾಗೂ ಮೋನು ಗೋಯೆತ್ ಅವರನ್ನು ಕೈಬಿಟ್ಟಿವೆ.