ಎಟಿಪಿ–250 ಸರಣಿಯಡಿ ಭಾರತದಲ್ಲಿ ನಡೆಯುವ ಏಕೈಕ ಟೂರ್ನಿಯಾಗಿರುವ ಚೆನ್ನೈ ಓಪನ್ಗೆ ಆತಿಥ್ಯ ನೀಡುವ ಅವಕಾಶ ಕೋರಿ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳ ಸಂಸ್ಥೆಗಳು ಕೂಡ ಬಿಡ್ ಸಲ್ಲಿಸಿದ್ದವು. ಆದರೆ ಮಹಾರಾಷ್ಟ್ರ ಸರ್ಕಾರವೇ ಟೂರ್ನಿ ಆಯೋಜನೆಗೆ ನೆರವು ನೀಡಲು ಮುಂದಾಗಿದ್ದರಿಂದ ಆ ರಾಜ್ಯದ ಸಂಸ್ಥೆ ಬಿಡ್ ಗೆದ್ದುಕೊಂಡಿತು.