ಆತಿಥೇಯ ಭಾರತ ಗೆಲುವಿನ ಮುನ್ನುಡಿ ಬರೆಯುವ ಕನವರಿಕೆಯಲ್ಲಿದೆ. ಬಲಗೈ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಮೊದಲ ಬಾರಿಗೆ ಭಾರತ ತಂಡದ ಸಾರಥ್ಯ ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಈ ಸರಣಿ ಅಗ್ನಿ ಪರೀಕ್ಷೆಯ ಕಣವಾಗಿದೆ. ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವ ಕಾರಣ ರೋಹಿತ್ಗೆ ನಾಯಕತ್ವ ಒಲಿದಿದೆ. ಅವರು ತಂಡವನ್ನು ಮುನ್ನಡೆಸುತ್ತಿರುವ ಭಾರತದ 24ನೇ ಆಟಗಾರ.