‘ಅಂದು ಪಂದ್ಯ ನಡೆಯುತ್ತಿದ್ದಾಗ ಡ್ರೆಸಿಂಗ್ ಕೊಠಡಿಯಲ್ಲಿ ಹಿರಿಯ ಆಟಗಾರರೊಬ್ಬರು 50ಕ್ಕೂ ಹೆಚ್ಚು ಸಿಗರೇಟ್ ಸೇದಿದ್ದರು. ಪಂದ್ಯ ಮುಗಿದ ನಂತರ ನಿರ್ದಿಷ್ಟ ಕಾರಣ ಹೇಳದೆ ಅಂದಿನ ನಾಯಕ ರಾಜೀನಾಮೆಗೆ ಮುಂದಾಗಿದ್ದರು. ಇಂಥ ಅನೇಕ ಸಂಶಯಾಸ್ಪದ ಪ್ರಸಂಗಗಳು ಆ ಪಂದ್ಯದ ಸುತ್ತ ಇವೆ. ಆದ್ದರಿಂದ ಅಂದಿನ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆಡಳಿತಾಧಿಕಾರಿಗಳು ತನಿಖೆ ನಡೆಸಬೇಕು’ ಎಂದು ಮಹಿಂದಾನಂದ ಒತ್ತಾಯಿಸಿದ್ದರು.