‘ದೆಹಲಿ ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟುಕೊಂಡು ಪಕ್ಷವು ಉತ್ತರ ಪ್ರದೇಶದ ಜನರಲ್ಲಿ ಮತಯಾಚನೆ ಮಾಡಲಿದೆ. ‘ದೆಹಲಿ ಮಾದರಿ’ಗೆ ಹೋಲಿಸಿದರೆ ‘ಗುಜರಾತ್ ಮಾದರಿ’ ಏನೂ ಅಲ್ಲ’ ಎಂದು ಎಎಪಿ ವಕ್ತಾರ ಸಂಜಯ್ ಸಿಂಗ್ ಹೇಳಿದ್ದಾರೆ. ‘ಕಾರ್ಯಕರ್ತರು ಜನರ ಬಳಿಗೆ ತೆರಳಿ ಪಕ್ಷದ ಅಭಿವೃದ್ಧಿ ಕಾರ್ಯಸೂಚಿ ಮತ್ತು ಯೋಜನೆಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ’ ಎಂದೂ ತಿಳಿಸಿದ್ದಾರೆ.