ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಜತೆಗೆ ರೆಶಿ ಕೆಲಸ ಮಾಡುತ್ತಿದ್ದ, ಉಗ್ರ ನೂರ್ ಮೊಹಮ್ಮದ್ ತಂತ್ರೇ ಅಲಿಯಾಸ್ ನೂರ್ ತ್ರಾಲಿಯ ಸಹಚರ ಎಂದು ಹೇಳಲಾಗಿದೆ. 2017ರಲ್ಲಿ ನೂರ್ನನ್ನು ಎನ್ಕೌಂಟರ್ನಲ್ಲಿ ಹೊಡೆದುರುಳಿಸಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಸಿಆರ್ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು ಎಂದು ಎನ್ಐಎ ತಿಳಿಸಿದೆ.