ಫೆ.14ರಂದು ಉದ್ಯಾನಗಳಲ್ಲಿ ಅಸಭ್ಯ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ತೋಟಗಾರಿಕೆ ಇಲಾಖೆ ಪೊಲೀಸರ ನೆರವು ಕೋರಿದೆ. ಹೀಗಾಗಿ ಪ್ರೇಮಿಗಳ ನೆಚ್ಚಿನ ತಾಣ ಎನಿಸಿಕೊಂಡಿರುವ ಎರಡು ಉದ್ಯಾನಗಳಲ್ಲಿ ಅಂದು ಪೊಲೀಸರ ಕಣ್ಗಾವಲು ಹೆಚ್ಚಿರಲಿದೆ. ಕುಟುಂಬ ಸಮೇತರಾಗಿ ಜನ ಉದ್ಯಾನಗಳಿಗೆ ಬರುವುದರಿಂದ ಮುಜುಗರ ಆಗುವಂತಹ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ.