‘ಅಮಿತ್ ಶಾ ಅವರು ಇತಿಹಾಸದ ಯಾವ ಪುಸ್ತಕವನ್ನು ಓದಿ, ಈ ಮಾತು ಹೇಳಿತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಸ್ವಾತಂತ್ರ್ಯಪೂರ್ವದಲ್ಲೂ ಭಾರತವು ಎರಡು ದೇಶವಾಗಿತ್ತು, ಹೀಗಾಗಿ ಧರ್ಮದ ಆಧಾರದಲ್ಲಿ ದೇಶ ವಿಭಜನೆ ಆಗಬೇಕು ಎಂಬುದು ವಿ.ಡಿ.ಸಾವರ್ಕರ್ ಮತ್ತು ಮಹಮ್ಮದ್ ಅಲಿ ಜಿನ್ನಾ ಅವರ ಪ್ರತಿಪಾದನೆಯಾಗಿತ್ತು. ಎರಡು ದೇಶಗಳ ಪರಿಕಲ್ಪನೆಯನ್ನು ಕಾಂಗ್ರೆಸ್ ವಿರೋಧಿಸಿತ್ತು. ಗೃಹಸಚಿವರುಕಾಂಗ್ರೆಸ್ನ ಮೇಲೆ ಮಾಡಿರುವ ಆರೋಪವನ್ನು ವಾಪಸ್ ಪಡೆಯಬೇಕು’ ಎಂದು ಕಾಂಗ್ರೆಸ್ನ ಕಪಿಲ್ ಸಿಬಲ್ ಆಗ್ರಹಿಸಿದರು.