– ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಾರ್ವಜನಿಕರನ್ನು ಪ್ರಶ್ನಿಸಿದ್ದು ಹೀಗೆ.
ಕಾಂಗ್ರೆಸ್ ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ ಪರವಾಗಿ ಭಾನುವಾರ ಮತಯಾಚಿಸಿದ ಅವರು, ‘ಮತದಾರರು ಪ್ರಜ್ಞಾವಂತಿಕೆಯಿಂದ ನಡೆದುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಅನ್ಯಾಯಗಳ ಕುರಿತು ಯೋಚಿಸಬೇಕು’ ಎಂದು ಹೇಳಿದರು.
‘ಮೋದಿ ಸರ್ಕಾರದಲ್ಲಿ ಆರ್ಬಿಐ ಗವರ್ನರ್ ರಾಜೀನಾಮೆ ಕೊಡುತ್ತಾರೆ. 70 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು. ನಿಮಗೆಲ್ಲ ತಿಳಿಯೋದಿಲ್ಲ; ನಾವೆಲ್ಲಾ ಹಳ್ಳಿ ಜನ. ಎರಡ್ಹೊತ್ತು ಊಟ ಸಿಕ್ಕರೆ ಸಾಕು ಎಂದು ಸುಮ್ಮನಿರಬಾರದು. ಕಾಂಗ್ರೆಸ್ನ ಕೊಡುಗೆಗಳೇನು ಎನ್ನುವುದನ್ನು ಗಂಭೀರವಾಗಿ ನೋಡಬೇಕು’ ಎಂದರು.