‘ಕೆಲವು ಅಭ್ಯರ್ಥಿಗಳು ಇತಿಹಾಸ, ಕನ್ನಡ ಹಾಗೂ ಸಮಾಜಶಾಸ್ತ್ರ ವಿಷಯಗಳಲ್ಲಿ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿ ಕೀ ಉತ್ತರಗಳು ಸರಿಯಲ್ಲ ವೆಂದು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದಾವೆ ಹೂಡಿದ್ದು, ನ್ಯಾಯಾಲಯವು ವಿಚಾರಣೆ ನಡೆಸಿ ಯಾವುದೇ ನಿರ್ದೇಶನವಾಗಲಿ, ತಡೆಯಾಜ್ಞೆಯಾಗಲೀ ನೀಡದೇ ಪ್ರಕರಣ ಮುಕ್ತಾಯಗೊಳಿಸಿದೆ. ಹೀಗಾಗಿ 1:2 ಅನುಪಾತದಲ್ಲಿ 2,320 ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯನ್ನು ಜುಲೈ2019ರಲ್ಲಿ ನಿರ್ವಹಿಸಲಾಗಿದೆ. 2019ರ ಆಗಸ್ಟ್ 26ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.ತಾತ್ಕಾಲಿಕ ಆಯ್ಕೆ ಪಟ್ಟಿಗೆ ಪೂರಕವಾಗಿ ಸ್ವೀಕರಿಸಲಾಗಿರುವ 91 ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ನಿಯಮಾನುಸಾರವೇ ಎಲ್ಲ ಕ್ರಮಗಳನ್ನು ನಿರ್ವಹಿಸಲಾಗಿರುತ್ತದೆ’ ಎಂದು ಕೆಇಎ ನೀಡಿದ ಉತ್ತರವನ್ನು ಉಲ್ಲೇಖಿಸಿ ಸಚಿವ ಸುರೇಶ್ಕುಮಾರ್ ಅವರು ಈ ಮಾಹಿತಿ ನೀಡಿದ್ದಾರೆ.