ಮೃತ ಯೋಧರ ಪಾರ್ಥಿವ ಶರೀರವು ಭಾನುವಾರ ದೆಹಲಿಯಿಂದ ವಿಮಾನದ ಮೂಲಕ ಹೊರಟು, ಗೋವಾ, ಬೆಳಗಾವಿ ಮೂಲಕ ಸ್ವಗ್ರಾಮಕ್ಕೆ ಬರುವ ಸಾಧ್ಯತೆಗಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ತಿಳಿಸಿದರು.
‘ಜಮ್ಮುಕಾಶ್ಮೀರದಲ್ಲಿ ವಾರದ ಹಿಂದೆ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ವೇಳೆ ಅವರು ಗುಂಡು ತಗುಲಿ ಗಂಭೀರಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಮಾಹಿತಿ ಬಂದಿತ್ತು ಎಂದು ನಿವೃತ್ತ ಸೈನಿಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಶಿಸನಹಳ್ಳಿ ತಿಳಿಸಿದರು. ಶಿವಲಿಂಗೇಶ್ವರ ಅವರು 2012ರಲ್ಲಿ ಸೇನೆಗೆ ಸೇರಿದ್ದರು.
ಶಿವಲಿಂಗೇಶ್ವರ ಅವರ ತಂದೆ ವೀರಭದ್ರಗೌಡ ಪಾಟೀಲ ನಿವೃತ್ತ ಯೋಧರಾಗಿದ್ದು, ಎರಡು ದಿನಗಳ ಹಿಂದೆ ದೆಹಲಿಗೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.