ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಪದ ಸೃಷ್ಟಿ–ಜವಗಂಟೆ

Published 30 ಡಿಸೆಂಬರ್ 2023, 23:30 IST
Last Updated 30 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಜವಗಂಟೆ

ಮೃತ್ಯುದೇವತೆ ಯಮನನ್ನು ‘ಜವ’ ಎನ್ನುವರು. ಅವನು ತರುವ ಸಾವು ಖಚಿತವಾದರೂ ಅನಿರೀಕ್ಷಿತವಾದುದು. ಅವನು ಆಸೆಗಳು ಅರಳಿ ಕೈಗೂಡುವ ಮೊದಲೆ ‘ಜವಗಂಟೆ’ಯನ್ನು ಬಾರಿಸಿ ಸಾವಿನ ಸೂಚನೆ ನೀಡುತ್ತ ಪ್ರಾಣವನ್ನು ಎಳೆದೊಯ್ಯುವನು. ಕುವೆಂಪು ಅವರು ಕಾಲನ ಕರೆಯನ್ನು ‘ಜವಗಂಟೆ’ ಎಂದು ಕರೆದಿದ್ದಾರೆ.


‘ಆಸೆಗಳರಳುವ ಮುನ್ನ

ಯಮ ಮಾರಾಯನು ತನ್ನ

ಜವಗಂಟೆಯ ‘ಝೇ’ ಎಂದ

ಎಳೆವನು ‘ಬಾ! ಬಾ!!’ ಎಂದು!

(ಎಷ್ಟೆಂದು ನಗಲೋದೇವ – ಕೊಳಲು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT