ಮತ್ತೆ `ಬರ~ ಬೇಡ (ಡಿ.ವಿ. ರಾಜಶೇಖರ) ಅವರ ಅನುಭವ ಕಥನ ನನ್ನ ಮನ ಕಲಕಿತು. ಬಿಜಾಪುರ ಜಿಲ್ಲೆಯ ಇಂಡಿಯಲ್ಲಿ ಬರದಿಂದ ತತ್ತರಿಸಿದ ರೈತಾಪಿ ಜನರು ದನಕರುಗಳನ್ನು ಸಾಕಲು ಸಾಧ್ಯವಾಗದೆ, ಹೋಟೆಲ್ನಲ್ಲಿ ತಿಂದ ಬಜಿಯ ಬದಲಿಗೆ ತಮ್ಮ ಜಾನುವಾರುಗಳನ್ನು ಬಿಟ್ಟುಹೋದ ದುರಂತವನ್ನು ನಾನು ಕಂಡಿದ್ದೇನೆ. ಅಂಥ ಪ್ರಸಂಗಗಳು ಮರುಕಳಿಸದಿರಲಿ.
`ಗಾಣಕ್ಕೆ ಸಿಕ್ಕ ಗಬಾಳಿಗರು~ (ಏ. 28, ವೀರಣ್ಣ ಮಡಿವಾಳರ) ಲೇಖನ ಕಾರ್ಮಿಕರ ದಿನಕ್ಕೆ ಮುನ್ನುಡಿಯಂತಿತ್ತು. ಕಬ್ಬು ಕಡಿಯುವ ಕಾಯಕವನ್ನೇ ನಂಬಿಕೊಂಡಿರುವ ಗಬಾಳಿಗರ ಬದುಕು ವಿಷಾದ ಉಂಟು ಮಾಡಿತು. ಸಮಾಜದ ಮುಂಚೂಣಿಗೆ ಬರದ ಇಂಥ ವರ್ಗಗಳ ಬಗ್ಗೆ ಅರಿವು ಮೂಡಿಸುವ ಲೇಖನಗಳು ಹೆಚ್ಚಾಗಬೇಕು.
-ಎಚ್. ಅಂಬಿಕಾ, ಕೊಪ್ಪಳ