<p>ಮುಂಬೈ: ಆದರ್ಶ ವಸತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯು (ಸಿಬಿಐ) ಬುಧವಾರ ಇಬ್ಬರು ನಿವೃತ್ತ ಉನ್ನತ ದರ್ಜೆಯ ಮೇಜರ್ ಜನರಲ್ಗಳು ಹಾಗೂ ಐಎಎಸ್ ಅಧಿಕಾರಿ ಸೇರಿದಂತೆ ನಾಲ್ವರನ್ನು ಬಂಧಿಸಿದೆ.<br /> <br /> ಈ ಹಗರಣದ ತನಿಖೆಗೆ ಸಂಬಂಧಿಸಿದಂತೆ ಗುರುವಾರ ಬಾಂಬೆ ಹೈಕೋರ್ಟ್ಗೆ ಸಿಬಿಐ ಸ್ಥಿತಿಗತಿ ವರದಿ ಸಲ್ಲಿಸಬೇಕಿದ್ದು, ಅದರ ಮುನ್ನಾದಿನ ಈ ಬಂಧನ ನಡೆದಿದೆ.<br /> <br /> ನಿವೃತ್ತ ಮೇಜರ್ ಜನರಲ್ಗಳಾದ ಎ.ಆರ್.ಕುಮಾರ್, ಟಿ.ಕೆ.ಕೌಲ್, ಮಹಾರಾಷ್ಟ್ರ ಸರ್ಕಾರದ ಹಣಕಾಸು ಇಲಾಖೆ ಕಾರ್ಯದರ್ಶಿ ಡಾ.ಪ್ರದೀಪ್ ವ್ಯಾಸ್ (ವೆಚ್ಚ ವಿಭಾಗ) ಮತ್ತು ಆದರ್ಶ ಸಂಸ್ಥೆಯ ಪ್ರಮುಖ ಪ್ರವರ್ತಕರೂ ಆದ ಮಾಜಿ ಶಾಸಕ ಕನ್ಹಿಯಾಲಾಲ್ ಗಿದ್ವಾನಿ ಬಂಧಿತರಾದವರು.<br /> <br /> ಸಿಬಿಐ ವಕೀಲರಿಗೆ ಲಂಚ ನೀಡಿದ್ದ ಆರೋಪಕ್ಕೆ ಸಿಲುಕಿ ಇಲ್ಲಿನ ಆರ್ಥರ್ ಜೈಲು ಸೇರಿದ್ದ ಗಿದ್ವಾನಿಗೆ ಜಾಮೀನು ಸಿಕ್ಕಿದ್ದು, ಬುಧವಾರ ಕಾರಾಗೃಹದ ಗೇಟ್ ತೆಗೆದು ಹೊರಬರುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದರು.ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆಯಾದವರ ಸಂಖ್ಯೆ ಏಳಕ್ಕೆ ಏರಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಬೈ: ಆದರ್ಶ ವಸತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯು (ಸಿಬಿಐ) ಬುಧವಾರ ಇಬ್ಬರು ನಿವೃತ್ತ ಉನ್ನತ ದರ್ಜೆಯ ಮೇಜರ್ ಜನರಲ್ಗಳು ಹಾಗೂ ಐಎಎಸ್ ಅಧಿಕಾರಿ ಸೇರಿದಂತೆ ನಾಲ್ವರನ್ನು ಬಂಧಿಸಿದೆ.<br /> <br /> ಈ ಹಗರಣದ ತನಿಖೆಗೆ ಸಂಬಂಧಿಸಿದಂತೆ ಗುರುವಾರ ಬಾಂಬೆ ಹೈಕೋರ್ಟ್ಗೆ ಸಿಬಿಐ ಸ್ಥಿತಿಗತಿ ವರದಿ ಸಲ್ಲಿಸಬೇಕಿದ್ದು, ಅದರ ಮುನ್ನಾದಿನ ಈ ಬಂಧನ ನಡೆದಿದೆ.<br /> <br /> ನಿವೃತ್ತ ಮೇಜರ್ ಜನರಲ್ಗಳಾದ ಎ.ಆರ್.ಕುಮಾರ್, ಟಿ.ಕೆ.ಕೌಲ್, ಮಹಾರಾಷ್ಟ್ರ ಸರ್ಕಾರದ ಹಣಕಾಸು ಇಲಾಖೆ ಕಾರ್ಯದರ್ಶಿ ಡಾ.ಪ್ರದೀಪ್ ವ್ಯಾಸ್ (ವೆಚ್ಚ ವಿಭಾಗ) ಮತ್ತು ಆದರ್ಶ ಸಂಸ್ಥೆಯ ಪ್ರಮುಖ ಪ್ರವರ್ತಕರೂ ಆದ ಮಾಜಿ ಶಾಸಕ ಕನ್ಹಿಯಾಲಾಲ್ ಗಿದ್ವಾನಿ ಬಂಧಿತರಾದವರು.<br /> <br /> ಸಿಬಿಐ ವಕೀಲರಿಗೆ ಲಂಚ ನೀಡಿದ್ದ ಆರೋಪಕ್ಕೆ ಸಿಲುಕಿ ಇಲ್ಲಿನ ಆರ್ಥರ್ ಜೈಲು ಸೇರಿದ್ದ ಗಿದ್ವಾನಿಗೆ ಜಾಮೀನು ಸಿಕ್ಕಿದ್ದು, ಬುಧವಾರ ಕಾರಾಗೃಹದ ಗೇಟ್ ತೆಗೆದು ಹೊರಬರುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದರು.ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆಯಾದವರ ಸಂಖ್ಯೆ ಏಳಕ್ಕೆ ಏರಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>