<p><strong>ಆಲಮಟ್ಟಿ: </strong>ಆಲಮಟ್ಟಿ ಸುತ್ತಮುತ್ತ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಭಾರಿ ಮಳೆ ಸುರಿದಿದ್ದು, ಹೊಲ ಗದ್ದೆಗಳಲ್ಲಿ ನೀರು ನಿಂತು ರೈತರಲ್ಲಿ ಹರ್ಷ ಮೂಡಿಸಿದೆ.ಭಾನುವಾರ ಆಲಮಟ್ಟಿಯಲ್ಲಿ 74.6 ಎಂ.ಎಂ. ಮಳೆಯಾಗಿದ್ದು, ಈ ಮಳೆಯಿಂದ ಹಿಂಗಾರು ಬೆಳೆ ಬಿತ್ತನೆಗೆ ರೈತರಿಗೆ ಅನುಕೂಲವಾಗಿದೆ.<br /> <br /> ಆಲಮಟ್ಟಿ ಸುತ್ತಮುತ್ತಲಿನ ನಿಡಗುಂದಿ, ಅರಳದಿನ್ನಿ, ಬೇನಾಳ, ವಂದಾಲ ಗ್ರಾಮದಲ್ಲಿಯೂ ಮಳೆಯಾಗಿದೆ. ಆಲಮಟ್ಟಿ ಡ್ಯಾಂಸೈಟ್ದಲ್ಲಂತೂ ಕೃಷ್ಣಾ ಭಾಗ್ಯ ಜಲ ನಿಗಮದ ಎಲ್ಲಾ ವಸಾಹತುಗಳು ಸೋರಿದ್ದು, ಅನೇಕ ಮನೆಗಳ ಕೋಣೆಗಳು ಕುಸಿದಿವೆ. <br /> <br /> ರಾತ್ರಿಯಿಡಿ ಆಲಮಟ್ಟಿಯ ವಸಾಹತುಗಳಲ್ಲಿ ವಾಸಿಸುವ ನೌಕರರು ಸೋರುವ ಮಾಳಿಗೆಯಿಂದ ಜಾಗರಣೆ ಮಾಡಿದ್ದಾರೆ. ಮನೆಯೊಳಗೆ ಹೊಕ್ಕ ನೀರನ್ನು ಹೊರಕ್ಕೆ ಹಾಕುವುದರಲ್ಲಿ ಸುಸ್ತಾದರು. ನೀರಿಲ್ಲದೇ ಕಮರುತ್ತಿದ್ದ ತೊಗರಿ ಬೆಳೆಗೆ ಈ ಮಳೆ ಜೀವ ನೀಡಿದ್ದಲ್ಲದೇ, ಹಿಂಗಾರು ಬೆಳೆ ಜೋಳ ಬೆಳೆಯಲು ಈ ಮಳೆ ಅನುಕೂಲವಾಗಿದೆ.<br /> <br /> ಆಲಮಟ್ಟಿಯಲ್ಲಿ 74.6 ಎಂ.ಎಂ, ಆರೇಶಂಕರದಲ್ಲಿ 39.8 ಎಂ.ಎಂ, ಹೂವಿನಹಿಪ್ಪರಗಿಯಲ್ಲಿ 18 ಎಂ.ಎಂ, ಬಸವನಬಾಗೇವಾಡಿಯಲ್ಲಿ 4.8 ಎಂ.ಎಂ, ಮಟ್ಟಿಹಾಳದಲ್ಲಿ 5 ಎಂ.ಎಂ. ಮಳೆಯಾಗಿದೆ. <br /> <br /> <strong>ಆಲಮಟ್ಟಿ ಅಣೆಕಟ್ಟಿಗೂ ನೀರು:</strong> ಕಳೆದ ಒಂದು ವಾರದಿಂದ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕ್ಷೀಣಿಸಿತ್ತು. ಭಾನುವಾರದ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ 10,697 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 12,000 ಕ್ಯೂಸೆಕ್ ನೀರನ್ನು ಕೆ.ಪಿ.ಸಿ.ಎಲ್. ಮೂಲಕ ನಾರಾಯಣಪೂರ ಜಲಾಶಯಕ್ಕೆ ಹರಿದು ಬಿಡಲಾಗುತ್ತಿದೆ.<br /> <br /> 519.6 ಮೀ ಎತ್ತರದ ಜಲಾಶಯದಲ್ಲಿ 519.46 ಮೀ ವರೆಗೆ ನೀರು ಸಂಗ್ರಹವಾಗಿದೆ.ಹೆಚ್ಚಿದ ವಿದ್ಯುತ್ ಉತ್ಪಾದನೆ: ಆಲಮಟ್ಟಿ ಜಲಾಶಯದಿಂದ ಕಳೆದ ಎರಡು ದಿನಗಳಿಂದ ಕೆ.ಪಿ.ಸಿ.ಎಲ್. ಮೂಲಕ 12,000 ಕ್ಯೂಸೆಕ್ ನೀರು ಹರಿದು ಬಿಟ್ಟಿರುವುದರಿಂದ ಆಲಮಟ್ಟಿಯಲ್ಲಿ ವಿದ್ಯುತ್ ಉತ್ಪಾದನೆಯೂ ಹೆಚ್ಚಳವಾಗಿದೆ. ವಿದ್ಯುದಾಗಾರದ ಮೂರು ಘಟಕಗಳಿಂದ ನಿತ್ಯ 2.2 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ: </strong>ಆಲಮಟ್ಟಿ ಸುತ್ತಮುತ್ತ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಭಾರಿ ಮಳೆ ಸುರಿದಿದ್ದು, ಹೊಲ ಗದ್ದೆಗಳಲ್ಲಿ ನೀರು ನಿಂತು ರೈತರಲ್ಲಿ ಹರ್ಷ ಮೂಡಿಸಿದೆ.ಭಾನುವಾರ ಆಲಮಟ್ಟಿಯಲ್ಲಿ 74.6 ಎಂ.ಎಂ. ಮಳೆಯಾಗಿದ್ದು, ಈ ಮಳೆಯಿಂದ ಹಿಂಗಾರು ಬೆಳೆ ಬಿತ್ತನೆಗೆ ರೈತರಿಗೆ ಅನುಕೂಲವಾಗಿದೆ.<br /> <br /> ಆಲಮಟ್ಟಿ ಸುತ್ತಮುತ್ತಲಿನ ನಿಡಗುಂದಿ, ಅರಳದಿನ್ನಿ, ಬೇನಾಳ, ವಂದಾಲ ಗ್ರಾಮದಲ್ಲಿಯೂ ಮಳೆಯಾಗಿದೆ. ಆಲಮಟ್ಟಿ ಡ್ಯಾಂಸೈಟ್ದಲ್ಲಂತೂ ಕೃಷ್ಣಾ ಭಾಗ್ಯ ಜಲ ನಿಗಮದ ಎಲ್ಲಾ ವಸಾಹತುಗಳು ಸೋರಿದ್ದು, ಅನೇಕ ಮನೆಗಳ ಕೋಣೆಗಳು ಕುಸಿದಿವೆ. <br /> <br /> ರಾತ್ರಿಯಿಡಿ ಆಲಮಟ್ಟಿಯ ವಸಾಹತುಗಳಲ್ಲಿ ವಾಸಿಸುವ ನೌಕರರು ಸೋರುವ ಮಾಳಿಗೆಯಿಂದ ಜಾಗರಣೆ ಮಾಡಿದ್ದಾರೆ. ಮನೆಯೊಳಗೆ ಹೊಕ್ಕ ನೀರನ್ನು ಹೊರಕ್ಕೆ ಹಾಕುವುದರಲ್ಲಿ ಸುಸ್ತಾದರು. ನೀರಿಲ್ಲದೇ ಕಮರುತ್ತಿದ್ದ ತೊಗರಿ ಬೆಳೆಗೆ ಈ ಮಳೆ ಜೀವ ನೀಡಿದ್ದಲ್ಲದೇ, ಹಿಂಗಾರು ಬೆಳೆ ಜೋಳ ಬೆಳೆಯಲು ಈ ಮಳೆ ಅನುಕೂಲವಾಗಿದೆ.<br /> <br /> ಆಲಮಟ್ಟಿಯಲ್ಲಿ 74.6 ಎಂ.ಎಂ, ಆರೇಶಂಕರದಲ್ಲಿ 39.8 ಎಂ.ಎಂ, ಹೂವಿನಹಿಪ್ಪರಗಿಯಲ್ಲಿ 18 ಎಂ.ಎಂ, ಬಸವನಬಾಗೇವಾಡಿಯಲ್ಲಿ 4.8 ಎಂ.ಎಂ, ಮಟ್ಟಿಹಾಳದಲ್ಲಿ 5 ಎಂ.ಎಂ. ಮಳೆಯಾಗಿದೆ. <br /> <br /> <strong>ಆಲಮಟ್ಟಿ ಅಣೆಕಟ್ಟಿಗೂ ನೀರು:</strong> ಕಳೆದ ಒಂದು ವಾರದಿಂದ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕ್ಷೀಣಿಸಿತ್ತು. ಭಾನುವಾರದ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ 10,697 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 12,000 ಕ್ಯೂಸೆಕ್ ನೀರನ್ನು ಕೆ.ಪಿ.ಸಿ.ಎಲ್. ಮೂಲಕ ನಾರಾಯಣಪೂರ ಜಲಾಶಯಕ್ಕೆ ಹರಿದು ಬಿಡಲಾಗುತ್ತಿದೆ.<br /> <br /> 519.6 ಮೀ ಎತ್ತರದ ಜಲಾಶಯದಲ್ಲಿ 519.46 ಮೀ ವರೆಗೆ ನೀರು ಸಂಗ್ರಹವಾಗಿದೆ.ಹೆಚ್ಚಿದ ವಿದ್ಯುತ್ ಉತ್ಪಾದನೆ: ಆಲಮಟ್ಟಿ ಜಲಾಶಯದಿಂದ ಕಳೆದ ಎರಡು ದಿನಗಳಿಂದ ಕೆ.ಪಿ.ಸಿ.ಎಲ್. ಮೂಲಕ 12,000 ಕ್ಯೂಸೆಕ್ ನೀರು ಹರಿದು ಬಿಟ್ಟಿರುವುದರಿಂದ ಆಲಮಟ್ಟಿಯಲ್ಲಿ ವಿದ್ಯುತ್ ಉತ್ಪಾದನೆಯೂ ಹೆಚ್ಚಳವಾಗಿದೆ. ವಿದ್ಯುದಾಗಾರದ ಮೂರು ಘಟಕಗಳಿಂದ ನಿತ್ಯ 2.2 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>