<p><span style="font-family: arial, helvetica, sans-serif;"><strong>ಬೆಂಗಳೂರು:</strong> ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಮುಗಿದಿದೆ. ಈಗ ಅಲ್ಲಿ ಜನಸ್ತೋಮವೂ ಇಲ್ಲ. ಹೂವಿನ ಅಲಂಕಾರವೂ ಇಲ್ಲ. ಮಂಗಳವಾರ ಉದ್ಯಾನದಲ್ಲಿ ಕಂಡದ್ದು ಕಸ ಮತ್ತು ಅದರ ದುರ್ನಾತ ಮಾತ್ರ.</span></p>.<p><span style="font-family:arial,helvetica,sans-serif;">ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ಸೋಮವಾರ ಮುಕ್ತಾಯಗೊಂಡಿದ್ದು, ಎಲ್ಲಿ ನೋಡಿದರೂ ಕಸದ ರಾಶಿಯೇ ಎದ್ದು ಕಾಣುತ್ತಿತ್ತು.<br /> <br /> ತೋಟಗಾರಿಕೆ ಇಲಾಖೆ ಮತ್ತು ಸ್ವಯಂ ಸೇವಕರು ಪ್ರದರ್ಶನಕ್ಕೆ ಬರುವ ಜನರಿಗೆ ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಲು ಬಾರಿ ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನರು ಮನಬಂದತೆ ಕಸ ಬಿಸಾಡಿ ಹೋಗಿದ್ದಾರೆ.<br /> <br /> ಗಾಜಿನ ಮನೆಯ ಪಕ್ಕದಲ್ಲಿ ಅಳವಡಿ ಸಲಾಗಿದ್ದ ಅಂಗಡಿಗಳ ಸಾಲಿನಲ್ಲಿ ಪ್ಲಾಸ್ಟಿಕ್ಗಳು ಕುರುಹುಗಳಾಗಿ ಉಳಿದುಕೊಂಡಿವೆ. ಉದ್ಯಾನದ ಮೂಲೆಗಳಲ್ಲಿ ಒಟ್ಟುಗೂಡಿಸಿರುವ ಹಸಿ ಕಸ ಗುಡ್ಡದಂತೆ ಬಿದ್ದಿದೆ. ಆರ್.ವಿ. ಪಬ್ಲಿಕ್ ಶಾಲೆ ಸ್ವಯಂಪ್ರೇರಿತರಾಗಿ ಮಂಗಳವಾರ ಉದ್ಯಾನದಲ್ಲಿದ್ದ ಒಣ ಕಸ ಎತ್ತಿಹಾಕಿ ಶುಚಿಗೊಳಿಸಿದರು.<br /> <br /> ‘ಉದ್ಯಾನದಲ್ಲಿ ರಾಶಿ ರಾಶಿ ಕಸ ಹಾಗೇ ಬಿದ್ದಿದೆ. ಇಲಾಖೆ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಇಲಾಖೆಯೊಂದಿಗೆ ಮಾತನಾಡಿದ್ದೇವೆ. ಶೀಘ್ರವಾಗಿ ಸ್ವಚ್ಛಗೊಳಿಸುವುದಾಗಿ ಹೇಳಿದ್ದಾರೆ’ ಎಂದು ಲಾಲ್ಬಾಗ್ ನಡಿಗೆದಾರರ ಸಂಘದ ಅಧ್ಯಕ್ಷ ಪಿ. ಸದಾಶಿವ ಅವರು ತಿಳಿಸಿದರು.<br /> <br /> ‘ಪ್ರದರ್ಶನ ಕೊನೆಯ ದಿನವನ್ನು ಹೊರತುಪಡಿಸಿ ಆಯಾ ದಿನದ ಕಸವನ್ನು ನಿಯಮಿತವಾಗಿ ಶುಚಿಗೊಳಿಸುತ್ತಿದ್ದೆವು. ಈಗಾಗಲೇ ನಾಲ್ಕು ಲಾರಿ ಕಸವನ್ನು ತೆರವುಗೊಳಿಸಿದ್ದೇವೆ. ಇದನ್ನು ಸ್ವಚ್ಛಗೊಳಿಸಲು ನಾಲ್ಕು ದಿನವಾದರೂ ಆಗುತ್ತದೆ’ ಎಂದು ಮೈಸೂರು ತೋಟಗಾರಿಕೆ ಸೊಸೈಟಿಯ ಅಧಿಕಾರಿ ವಿವರಿಸಿದರು.<br /> <br /> <strong>ಹೆಜ್ಜೇನು ಕಡಿದವರ ಆರೋಗ್ಯ ಸ್ಥಿರ: </strong>ಲಾಲ್ಬಾಗ್ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ಭೇಟಿ ನೀಡಿದ್ದ ಇಬ್ಬರಲ್ಲ, ಒಟ್ಟು ನಾಲ್ವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ.<br /> <br /> ಶಿವರಾಜು, ಹನುಮಂತೇಗೌಡ ಅವರೊಂದಿಗೆ ಜಿತೇಂದ್ರ ಕುಮಾರ್ ಮತ್ತು ಸೂರಜ್ ಎಂಬುವವರಿಗೂ ಸಹ ಹೆಜ್ಜೇನು ಕಡಿದಿದ್ದು, ಅವರಿಗೆ ಗಾಜಿನ ಮನೆಯ ಪಕ್ಕದಲ್ಲಿ ತೆರೆದಿದ್ದ ವೈದ್ಯಕೀಯ ಶಿಬಿರದಲ್ಲಿ ತಕ್ಷಣ ಚಿಕಿತ್ಸೆ ನೀಡಲಾಯಿತು. ತೀವ್ರ ನಿಗಾ ಘಟಕದಲ್ಲಿ ಇರಿಸಲಾದ ಶಿವರಾಜು, ಹನುಮಂತೇಗೌಡ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-family: arial, helvetica, sans-serif;"><strong>ಬೆಂಗಳೂರು:</strong> ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಮುಗಿದಿದೆ. ಈಗ ಅಲ್ಲಿ ಜನಸ್ತೋಮವೂ ಇಲ್ಲ. ಹೂವಿನ ಅಲಂಕಾರವೂ ಇಲ್ಲ. ಮಂಗಳವಾರ ಉದ್ಯಾನದಲ್ಲಿ ಕಂಡದ್ದು ಕಸ ಮತ್ತು ಅದರ ದುರ್ನಾತ ಮಾತ್ರ.</span></p>.<p><span style="font-family:arial,helvetica,sans-serif;">ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ಸೋಮವಾರ ಮುಕ್ತಾಯಗೊಂಡಿದ್ದು, ಎಲ್ಲಿ ನೋಡಿದರೂ ಕಸದ ರಾಶಿಯೇ ಎದ್ದು ಕಾಣುತ್ತಿತ್ತು.<br /> <br /> ತೋಟಗಾರಿಕೆ ಇಲಾಖೆ ಮತ್ತು ಸ್ವಯಂ ಸೇವಕರು ಪ್ರದರ್ಶನಕ್ಕೆ ಬರುವ ಜನರಿಗೆ ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಲು ಬಾರಿ ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನರು ಮನಬಂದತೆ ಕಸ ಬಿಸಾಡಿ ಹೋಗಿದ್ದಾರೆ.<br /> <br /> ಗಾಜಿನ ಮನೆಯ ಪಕ್ಕದಲ್ಲಿ ಅಳವಡಿ ಸಲಾಗಿದ್ದ ಅಂಗಡಿಗಳ ಸಾಲಿನಲ್ಲಿ ಪ್ಲಾಸ್ಟಿಕ್ಗಳು ಕುರುಹುಗಳಾಗಿ ಉಳಿದುಕೊಂಡಿವೆ. ಉದ್ಯಾನದ ಮೂಲೆಗಳಲ್ಲಿ ಒಟ್ಟುಗೂಡಿಸಿರುವ ಹಸಿ ಕಸ ಗುಡ್ಡದಂತೆ ಬಿದ್ದಿದೆ. ಆರ್.ವಿ. ಪಬ್ಲಿಕ್ ಶಾಲೆ ಸ್ವಯಂಪ್ರೇರಿತರಾಗಿ ಮಂಗಳವಾರ ಉದ್ಯಾನದಲ್ಲಿದ್ದ ಒಣ ಕಸ ಎತ್ತಿಹಾಕಿ ಶುಚಿಗೊಳಿಸಿದರು.<br /> <br /> ‘ಉದ್ಯಾನದಲ್ಲಿ ರಾಶಿ ರಾಶಿ ಕಸ ಹಾಗೇ ಬಿದ್ದಿದೆ. ಇಲಾಖೆ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಇಲಾಖೆಯೊಂದಿಗೆ ಮಾತನಾಡಿದ್ದೇವೆ. ಶೀಘ್ರವಾಗಿ ಸ್ವಚ್ಛಗೊಳಿಸುವುದಾಗಿ ಹೇಳಿದ್ದಾರೆ’ ಎಂದು ಲಾಲ್ಬಾಗ್ ನಡಿಗೆದಾರರ ಸಂಘದ ಅಧ್ಯಕ್ಷ ಪಿ. ಸದಾಶಿವ ಅವರು ತಿಳಿಸಿದರು.<br /> <br /> ‘ಪ್ರದರ್ಶನ ಕೊನೆಯ ದಿನವನ್ನು ಹೊರತುಪಡಿಸಿ ಆಯಾ ದಿನದ ಕಸವನ್ನು ನಿಯಮಿತವಾಗಿ ಶುಚಿಗೊಳಿಸುತ್ತಿದ್ದೆವು. ಈಗಾಗಲೇ ನಾಲ್ಕು ಲಾರಿ ಕಸವನ್ನು ತೆರವುಗೊಳಿಸಿದ್ದೇವೆ. ಇದನ್ನು ಸ್ವಚ್ಛಗೊಳಿಸಲು ನಾಲ್ಕು ದಿನವಾದರೂ ಆಗುತ್ತದೆ’ ಎಂದು ಮೈಸೂರು ತೋಟಗಾರಿಕೆ ಸೊಸೈಟಿಯ ಅಧಿಕಾರಿ ವಿವರಿಸಿದರು.<br /> <br /> <strong>ಹೆಜ್ಜೇನು ಕಡಿದವರ ಆರೋಗ್ಯ ಸ್ಥಿರ: </strong>ಲಾಲ್ಬಾಗ್ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ಭೇಟಿ ನೀಡಿದ್ದ ಇಬ್ಬರಲ್ಲ, ಒಟ್ಟು ನಾಲ್ವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ.<br /> <br /> ಶಿವರಾಜು, ಹನುಮಂತೇಗೌಡ ಅವರೊಂದಿಗೆ ಜಿತೇಂದ್ರ ಕುಮಾರ್ ಮತ್ತು ಸೂರಜ್ ಎಂಬುವವರಿಗೂ ಸಹ ಹೆಜ್ಜೇನು ಕಡಿದಿದ್ದು, ಅವರಿಗೆ ಗಾಜಿನ ಮನೆಯ ಪಕ್ಕದಲ್ಲಿ ತೆರೆದಿದ್ದ ವೈದ್ಯಕೀಯ ಶಿಬಿರದಲ್ಲಿ ತಕ್ಷಣ ಚಿಕಿತ್ಸೆ ನೀಡಲಾಯಿತು. ತೀವ್ರ ನಿಗಾ ಘಟಕದಲ್ಲಿ ಇರಿಸಲಾದ ಶಿವರಾಜು, ಹನುಮಂತೇಗೌಡ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>