<p>ಮಂಗಳೂರು: `ಕವನದ ಹುಟ್ಟು ಸಹಜವಾಗಿರಬೇಕೇ ಹೊರತು ಅದು ಪ್ರಜ್ಞಾಪೂರ್ವಕವಾಗಿರಬಾರದು. ಕವಿ ಉಳಿಯುವುದು ಎಲ್ಲಾ ಕಾಲಕ್ಕೂ ಸಲ್ಲುವ ಸಲ್ಲುವ ಕವನಗಳನ್ನು ರಚಿಸಿದಾಗ ಮಾತ್ರ~ ಎಂದು ಸಾಹಿತಿ ರೂಪಾ ಹಾಸನ ಹೇಳಿದರು.<br /> <br /> ಅವರು ಈಚೆಗೆ ಇಲ್ಲಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಡಾ.ಕೆ.ವಿ.ಜಲಜಾಕ್ಷಿ ಸಂಸ್ಮರಣ ಪ್ರತಿಷ್ಠಾನಗಳ ಆಶ್ರಯದಲ್ಲಿ ನಡೆದ ಡಾ.ಕೆ.ವಿ.ಜಲಜಾಕ್ಷಿ ಸಂಸ್ಮರಣೆ ಹಾಗೂ ಕವನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.<br /> <br /> ಜಲಜಾಕ್ಷಿ ಅವರ ಸಣ್ಣಕತೆಗಳ ಕುರಿತಾಗಿ ಎನ್.ಕೆ.ರಾಜಲಕ್ಷ್ಮಿ ಮಾತನಾಡಿದರು. ಸಂಘ ಅಧ್ಯಕ್ಷೆ ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ವಿ.ಜಿ.ಭಟ್, ಸಾಹಿತಿ ಚಂದ್ರಕಲಾ ನಂದಾವರ, ಸಂಘ ಕಾರ್ಯದರ್ಶಿ ಯು.ಶೈಲಾ ಮಾತನಾಡಿದರು.<br /> <br /> ಕವನ ಸ್ಪರ್ಧೆಯಲ್ಲಿ ಸಂತ ಆ್ಯಗ್ನೆಸ್ ಕಾಲೇಜಿನ ವಿನಯಾ ಭಟ್, ಸುರತ್ಕಲ್ ಗೋವಿಂದದಾಸ ಕಾಲೇಜಿನ ಎಂ.ಪವನ್ ಮತ್ತು ಕಾಸರಗೋಡು ಸರ್ಕಾರಿ ಕಾಲೇಜಿನ ಸುಭಾಷ್ ಪಟ್ಟಾಜೆ ಮೊದಲ ಮೂರು ಬಹುಮಾನ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: `ಕವನದ ಹುಟ್ಟು ಸಹಜವಾಗಿರಬೇಕೇ ಹೊರತು ಅದು ಪ್ರಜ್ಞಾಪೂರ್ವಕವಾಗಿರಬಾರದು. ಕವಿ ಉಳಿಯುವುದು ಎಲ್ಲಾ ಕಾಲಕ್ಕೂ ಸಲ್ಲುವ ಸಲ್ಲುವ ಕವನಗಳನ್ನು ರಚಿಸಿದಾಗ ಮಾತ್ರ~ ಎಂದು ಸಾಹಿತಿ ರೂಪಾ ಹಾಸನ ಹೇಳಿದರು.<br /> <br /> ಅವರು ಈಚೆಗೆ ಇಲ್ಲಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಡಾ.ಕೆ.ವಿ.ಜಲಜಾಕ್ಷಿ ಸಂಸ್ಮರಣ ಪ್ರತಿಷ್ಠಾನಗಳ ಆಶ್ರಯದಲ್ಲಿ ನಡೆದ ಡಾ.ಕೆ.ವಿ.ಜಲಜಾಕ್ಷಿ ಸಂಸ್ಮರಣೆ ಹಾಗೂ ಕವನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.<br /> <br /> ಜಲಜಾಕ್ಷಿ ಅವರ ಸಣ್ಣಕತೆಗಳ ಕುರಿತಾಗಿ ಎನ್.ಕೆ.ರಾಜಲಕ್ಷ್ಮಿ ಮಾತನಾಡಿದರು. ಸಂಘ ಅಧ್ಯಕ್ಷೆ ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ವಿ.ಜಿ.ಭಟ್, ಸಾಹಿತಿ ಚಂದ್ರಕಲಾ ನಂದಾವರ, ಸಂಘ ಕಾರ್ಯದರ್ಶಿ ಯು.ಶೈಲಾ ಮಾತನಾಡಿದರು.<br /> <br /> ಕವನ ಸ್ಪರ್ಧೆಯಲ್ಲಿ ಸಂತ ಆ್ಯಗ್ನೆಸ್ ಕಾಲೇಜಿನ ವಿನಯಾ ಭಟ್, ಸುರತ್ಕಲ್ ಗೋವಿಂದದಾಸ ಕಾಲೇಜಿನ ಎಂ.ಪವನ್ ಮತ್ತು ಕಾಸರಗೋಡು ಸರ್ಕಾರಿ ಕಾಲೇಜಿನ ಸುಭಾಷ್ ಪಟ್ಟಾಜೆ ಮೊದಲ ಮೂರು ಬಹುಮಾನ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>