<p><strong>ಕನಕಪುರ:</strong> ಕಾಡಾನೆ ದಾಳಿಯಿಂದ ಕೃಷ್ಣ (38) ಎಂಬ ರೈತ ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ಕೆರಳಾಳುಸಂದ್ರ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ 6 ಗಂಟೆ ಸಮಯದಲ್ಲಿ ನಡೆದಿದೆ.<br /> <br /> ಕೃಷ್ಣ ಅವರು ತೋಟದಲ್ಲಿ ಸೊಪ್ಪು ಬಿಡಿಸುತ್ತಿದ್ದಾಗ ಒಂಟಿ ಆನೆಯೊಂದು ಸದ್ದು ಮಾಡದೆ ಬಂದು ದಾಳಿ ಮಾಡಿದೆ. ಅವರ ಸೊಂಟ, ಕೈ ಮತ್ತು ಕಾಲುಗಳಿಗೆ ತೀವ್ರವಾದ ಗಾಯಗಳಾಗಿವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.<br /> <br /> ಬುಧವಾರ ರಾತ್ರಿ ಗ್ರಾಮದ ವಿವಿಧ ತೋಟಗಳಿಗೆ ದಾಳಿ ನಡೆಸಿರುವ ಈ ಪುಂಡಾನೆ ಗೋಪಾಲೇ ಗೌಡ ಎಂಬುವವರ ಪಂಪ್ಸೆಟ್, ಮುನಿಸಿದ್ದೇಗೌಡ ಎಂಬುವವರ ಹಲಸು, ಬಾಳೆ ತೋಟವನ್ನು ನಾಶ ಮಾಡಿದೆ.<br /> <br /> <strong>ಆಗ್ರಹ: </strong>ಈ ಭಾಗದಲ್ಲಿ ಕಾಡಾನೆಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು ಅರಣ್ಯ ಇಲಾಖೆಯವರು ಶೀಘ್ರವೇ ಸೋಲಾರ್ ತಂತಿ ಬೇಲಿ ಅಳವಡಿಸಲು ಕಾರ್ಯೋನ್ಮುಖರಾಗಬೇಕು ಎಂದು ಮುಕ್ತ ಟ್ರಸ್ಟ್ ಅಧ್ಯಕ್ಷ ವಿಜಯಾಕುಮಾರ್ ಆಗ್ರಹಿಸಿದ್ದಾರೆ.<br /> <br /> ಸೋಲಾರ್ ತಂತಿ ಬೇಲಿ ನಿರ್ಮಿಸುವುದಕ್ಕೆ ಇಲಾಖೆಯು ಈಗಾಗಲೇ ಟೆಂಡರ್ ಕರೆದಿದೆ. ಈ ತಿಂಗಳ 15ರ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು ಆದರೆ ಇನ್ನೂ ಆರಂಭವಾಗಿಲ್ಲ ಎಂದು ಅವರು ದೂರಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ಕಾಡಾನೆ ದಾಳಿಯಿಂದ ಕೃಷ್ಣ (38) ಎಂಬ ರೈತ ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ಕೆರಳಾಳುಸಂದ್ರ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ 6 ಗಂಟೆ ಸಮಯದಲ್ಲಿ ನಡೆದಿದೆ.<br /> <br /> ಕೃಷ್ಣ ಅವರು ತೋಟದಲ್ಲಿ ಸೊಪ್ಪು ಬಿಡಿಸುತ್ತಿದ್ದಾಗ ಒಂಟಿ ಆನೆಯೊಂದು ಸದ್ದು ಮಾಡದೆ ಬಂದು ದಾಳಿ ಮಾಡಿದೆ. ಅವರ ಸೊಂಟ, ಕೈ ಮತ್ತು ಕಾಲುಗಳಿಗೆ ತೀವ್ರವಾದ ಗಾಯಗಳಾಗಿವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.<br /> <br /> ಬುಧವಾರ ರಾತ್ರಿ ಗ್ರಾಮದ ವಿವಿಧ ತೋಟಗಳಿಗೆ ದಾಳಿ ನಡೆಸಿರುವ ಈ ಪುಂಡಾನೆ ಗೋಪಾಲೇ ಗೌಡ ಎಂಬುವವರ ಪಂಪ್ಸೆಟ್, ಮುನಿಸಿದ್ದೇಗೌಡ ಎಂಬುವವರ ಹಲಸು, ಬಾಳೆ ತೋಟವನ್ನು ನಾಶ ಮಾಡಿದೆ.<br /> <br /> <strong>ಆಗ್ರಹ: </strong>ಈ ಭಾಗದಲ್ಲಿ ಕಾಡಾನೆಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು ಅರಣ್ಯ ಇಲಾಖೆಯವರು ಶೀಘ್ರವೇ ಸೋಲಾರ್ ತಂತಿ ಬೇಲಿ ಅಳವಡಿಸಲು ಕಾರ್ಯೋನ್ಮುಖರಾಗಬೇಕು ಎಂದು ಮುಕ್ತ ಟ್ರಸ್ಟ್ ಅಧ್ಯಕ್ಷ ವಿಜಯಾಕುಮಾರ್ ಆಗ್ರಹಿಸಿದ್ದಾರೆ.<br /> <br /> ಸೋಲಾರ್ ತಂತಿ ಬೇಲಿ ನಿರ್ಮಿಸುವುದಕ್ಕೆ ಇಲಾಖೆಯು ಈಗಾಗಲೇ ಟೆಂಡರ್ ಕರೆದಿದೆ. ಈ ತಿಂಗಳ 15ರ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು ಆದರೆ ಇನ್ನೂ ಆರಂಭವಾಗಿಲ್ಲ ಎಂದು ಅವರು ದೂರಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>